Poem

ಗೌತಮ

ನಿದ್ದೆಯಿಂದ ಎದ್ದು ಬಂದವನಿಲ್ಲಿ
ಬುದ್ಧನೆಂದು ಸಾರಿದ
ಚಾತುರಾರ್ಯ ಸತ್ಯಗಳಿಲ್ಲಿ
ಮುಕ್ತಿಗೆ ಅಷ್ಟಾಂಗ ಮಾರ್ಗಗಳೆಂದ

ದೇಹವನ್ನು ದಂಡಿಸುತಲಿ
ಆಸೆಯನು ಮರೆತನು
ದುಃಖಕ್ಕೆ ಇದುವೇ ಮೂಲವೆನುತಲಿ
ಜಾಗೃತರಾಗಿ ಎಂದನು

ಈ ಭೂಮಿಯೊಳು ನಾನು
ದೇವರಲ್ಲವೆಂದನು
ಮೈಮನದ ಶುದ್ಧಿಯೊಳು ತಾನು
ದೇವದೂತನೆಂದನು

ದಯೆಯೇ ಧರ್ಮದ ಮೂಲವೆಂದನು
ಹಿಂಸೆಯನು ಖಂಡಿಸುತಲಿ
ಸಕಲ ಜೀವ-ಜಂತುಗಳ ಪ್ರೀತಿಸೆಂದನು
ಧಮ್ಮ ಬೆಳಕು ಚೆಲ್ಲುತಲಿ

ಬೋಧಿವೃಕ್ಷದಡಿಯಲಿ ಜ್ಞಾನವನು
ಪಡೆದ ಮಹಾಗುರುವೇ ಅವನು
ಬದುಕ ಆ ಘೋರ ದುಃಖಕೆ ಮರುಗಿದನು
ಈ ಸಂಜೀವಿನಿ ಮಹಾತ್ಮನು

- ರಾಜಶೇಖರ ನಾಗೂರ

ವಿಡಿಯೋ
ವಿಡಿಯೋ

ರಾಜಶೇಖರ ನಾಗೂರ

ರಾಜಶೇಖರ ನಾಗೂರ ಅವರು ಮೂಲತಃ ಹುಬ್ಬಳ್ಳಿಯವರು. ಹಿರಿಯ ಪಶುವೈದ್ಯಾಧಿಕಾರಿಯಾಗಿ ವೃತ್ತಿನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ.

More About Author