ಅದಕ್ಕೊಂದು ಪ್ರೀತಿ ಇರಬೇಕು.
ಸರಸ, ಮಿಲನ, ನಶೆ ಏರಿಸುವ ಅವನ ನೋಟ ಮೇಲು ದನಿಯ ಮಾತುಗಳು
ಹೀಗೆ ಏನಾದರೊಂದು
ಅನುಭವಬೇಕು
ಕವಿತೆ ಸುಮ್ಮನೆ ಹುಟ್ಟುವುದಿಲ್ಲ
ಅದಕ್ಕೆ ಅವನು ಸೃಷ್ಟಿಸುವ ವಿರಹ , ಅದ್ಕಂಟಿದ ವಿಷಾಧವಾದರೂ ಬೇಕೇ ಬೇಕು
ನೋವು ಆರಿದ ಮೇಲು ಕಲೆಯೊಂದು ಉಳಿಸಿ ಹೋಗುವ ಗಾಯದ ಹಾಗೆ
ನೆನಪುಗಳ ಇರಿತಕ್ಕೆ ಘಾಸಿ ಗೊಳ್ಳುತ್ತಲೇ ಇರಬೇಕು ಮನಸ್ಸು
ಸುಮ ಮಂಜುನಾಥ್ ಮೂಲತಃ ಶಿವಮೊಗ್ಗದವರು. ಪ್ರಸ್ತುತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಓದುವುದು, ವೀಣೆ ನುಡಿಸುವುದು ಹಾಗೂ ಕತೆ ಕವನ ಲೇಖನ ಬರೆಯುವಿಕೆ ಅವರ ಹವ್ಯಾಸವಾಗಿದೆ.