Poem

ಮುಕ್ತಿ

ಮುಕ್ತಿ
ಲೋಕದ ಭವ ಬಂಧನಗಳಿಂದ ಮುಕ್ತನಾಗಿ
ನೆರೆಯಲ್ಲಿ ಸುಮ್ಮನೆ ತೇಲಿ ಹೋಗಿಬಿಡಬೇಕು

ಫಲಭರಿತ ಮಣ್ಣಿನ ಜೊತೆ
ಫಲ ಬಿಡುವ ವೃಕ್ಷದ ಬೇರು
ನನ್ನ ತಾಕಿ ಫಲ ಕಾಣಬೇಕು

ನಾಳೆ ಮಗುವೊಂದು ಆ ಮರದ
ಫಲ ಹಿಡಿದು ನನ್ನ ಹಲ್ಲಿರದ ಬಾಯಿಂದ
ಕಚ್ಚಿ ಹಿಡಿಯಬೇಕು

- ಕೊಟ್ರೇಶ್ ಅರಸೀಕೆರೆ

ವಿಡಿಯೋ

ಕೊಟ್ರೇಶ್ ಅರಸೀಕೆರೆ

ಕವಿ ಕೊಟ್ರೇಶ್ ಅರಸೀಕೆರೆ ಅವರು 1975ರಲ್ಲಿ ಅರಸೀಕೆರೆಯಲ್ಲಿ ಜನಿಸಿದರು. ತಂದೆ ನೀಲಕಂಠ ಸ್ವಾಮಿ, ತಾಯಿ ಸುಗುಣಾಂಬ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವನ್ನು ಅರಸೀಕೆರೆಯಲ್ಲಿಯೇ ಪೂರೈಸಿದರು. ಅರಸೀಕೆರೆಯಲ್ಲಿ ಸಣ್ಣದೊಂದು ಬೆಣ್ಣೆ ದೋಸೆ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಾಹಿತ್ಯ, ರಂಗಭೂಮಿಯಲ್ಲಿಯೂ ಆಸಕ್ತರು. ‘ಭವಸಾರ’ ಅವರ ಚೊಚ್ಚಲ ಕವನ ಸಂಕಲನ.

More About Author