Poem

ನಿನ್ನ ಒಲವಿನಲಿ 

ಇನಿತು ಮುನಿಸೇಕೆ ಗೆಳತಿ ನಸು ನಗುತ ಅವತರಿಸು
ಅನಿತು ದೂರದಲಿ ನಿಂತು ಮನ ಹರುಷ ಆಸ್ವಾದಿಸು

ನೀಳ ಕುರುಳು ನವಿರಾಗಿ ಜಾರುತಿರೆ ಇಳೆಗೆ ಮಳೆ ಸುರಿದಂತೆ
ಆಳ ಸಾಗರ ಅಲೆಯಾಗಿ ಹೊಮ್ಮುತಿರೆ ಬಾಳಿಗೆ ಭಾವ ಹರಿದಂತೆ

ಇನಿದಾದ ಸರದಲಿ ಮನವೆಲ್ಲ ಜತನದಿ ಓಡಾಡಿ ನದಿಯಾದೆ
ಸನಿಹದಿ ನವಿರಾಗಿ ಕನಸೆಲ್ಲಾ ತುಳುಕುತ ಓಲಾಡಿ ಕಲೆಯಾದೆ

ಒಂದು ಗಂಭೀರ ಮೌನ ನಿನ್ನ ವದನಕೆ ಸೊಗಸು ಸುರಿಸಿದೆ
ಅಂದದ ತಿಳಿ ನಗುವು ನಿನ್ನ ಕಣ್ಣಿಗೆ ಒಲವು ತುಂಬಿದೆ

ನಿನ್ನೊಲವಿನಲಿ ಒಯ್ದಾಡಿ ಒಡನಾಡಿ ಮನ ಮುದಗೊಂಡಿದೆ
ಕಣ್ಣಿನಾಳದಲಿ ಸೊಗಸಾಗಿ ತುಳುಕಾಡಿ ಎದೆ ಮೇರೆ ಮೀರಿದೆ

ಅಷ್ಟು ಬೆಳಕಾಯಿತು ನನ್ನ ಜಗವು ನಿನ್ನಿರುವಿಕೆಯ ದೆಸೆಯಿಂದ
ಇಷ್ಟು ಸಾಕಾಯಿತು ಬಾಳಿಗೆ ಮನ ಹಗುರವಾಯಿತು ಒಲವಿಂದ

ರಚನೆ: ಎಂ.ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author