Poem

ಊರು ಕೇರಿಯ ಹಾಡುಗಾರ

ಮಂಚನಬೆಲೆಯ ಗ್ರಾಮವೊಂದರಲಿ
ಕವಿ ಸಿದ್ದಲಿಂಗಯ್ಯನವರು ಜನಿಸಿದರು
ತಾಯಿ ವೆಂಕಮ್ಮ ತಂದೆ ದೇವಯ್ಯ
ಇವರ ಪೋಷಣೆಯಲಿ ಬೆಳೆದಿಹರು.
ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ
ಇವರ ವಿದ್ಯಾಕೇಂದ್ರವಾಗಿತ್ತು
ಓದು ಬರಹ ಭಾಷಣಕಾರರಾಗಿ
ಕವಿತೆ ಬರೆವ ಹವ್ಯಾಸ ಇವರಿಗಿತ್ತು.
ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ
ಸಾಹಿತ್ಯದಲಿ ದಲಿತ ಕವಿಯಾಗಿ
ಬಂಡಾಯ ಸಾಹಿತಿಯೆಂದು ಆಗಲೇ
ದೊಡ್ಡ ಹೆಸರನು ಮಾಡಿದರು.
ವಿಧಾನ ಪರಿಷತ್ತಿನ ಸದಸ್ಯರಾಗಿ
ಅಧ್ಯಾಪನ ಬರವಣಿಗೆಯಲಿ ತೊಡಗಿದರು
ಕಾವ್ಯ,ನಾಟಕ, ವಿಮರ್ಶೆ, ಪ್ರಬಂಧ
ಇತ್ಯಾದಿ ಬರೆಯುತ ಮುನ್ನುಗ್ಗಿದರು.
ಗ್ರಾಮದೇವತೆಗಳು ಪಿಎಚ್ಡಿ ಪ್ರಬಂಧ
ಊರು ಕೇರಿ ಎಂಬ ಆತ್ಮಕಥನ ರಚಿಸಿದರು
'ಇಕ್ರಲಾ ವದೀರ್ಲಾ' ಈ ಪದಗಳ ಬಳಸಿ
ಸಾಹಿತ್ಯದಲಿ ಚರ್ಚೆಗೆ ಗ್ರಾಸವಾಗಿಹರು.
ಪ್ರಾಧಿಕಾರಗಳ ಅಧ್ಯಕ್ಷರಾಗಿ
ಉತ್ತಮ ಆಡಳಿತ ನೀಡಿದರು
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ
ಕನ್ನಡಮ್ಮನ ತೇರ ಎಳೆದಿಹರು.
ಬದುಕಿನುದ್ದಕ್ಕೂ ಎಗ್ಗಿಲ್ಲದೆ ಬರೆಯುತ
ಹಲವು ಪ್ರಶಸ್ತಿಗಳಿಗೆ ಭಾಜನರಾಗಿಹರು
ಸಾಹಿತ್ಯ ಲೋಕದ ಕಣ್ಮಣಿಯಾಗಿ
ಸಾರ್ಥಕ ಜೀವನ ನಡೆಸಿದರು.
ನಮ್ಮ ನಿಮ್ಮೆಲ್ಲರ ನೆಚ್ಚಿನ ಕವಿಯನು
ಅನುದಿನ ಕ್ಷಣ ಕ್ಷಣ ಸ್ಮರಿಸೋಣ
ಅವರು ನಡೆದ ಹಾದಿಯಲ್ಲಿ
ಸಾಹಿತ್ಯ ಕೃಷಿಯನು ಬೆಳೆಸೋಣ.

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author