ಕಣ್ಣಂಚಿನಲ್ಲೇ ಹೂ ನಗೆಯ ಚೆಲ್ಲಿ ಪ್ರೀತಿಯ ಸಾಗರಕ್ಕೆ ಕರೆತಂದೆ ನೀನು ಅದೇನು ಸೆಳೆತವೋ ಸುಳಿಯೇ ಅರಿಯದೆ ಹೆಜ್ಜೆ ಹಾಕಿದೆ ನಾನು
ಮೃದು ಮಾತುಗಳ ಸೌದ ಕಟ್ಟಿ ಕೈಬಿಡೆನೆಂಬ ವಚನಕೊಟ್ಟು ಪ್ರೀತಿ ದೋಣಿಯಲ್ಲಿ ಕುಳ್ಳಿರಿಸಿದೆ ಅಲ್ಲಿದ್ದವರು ನಾನು ಮತ್ತು ನೀನು
ಬಹುದೂರ ಸಾಗಿದ್ದೆವು ನಮ್ಮದೇ ಲೋಕದಲ್ಲಿ ಪ್ರೀತಿ ಹೊರತು ನಮಗೇನು ಬೇಕಿರಲಿಲ್ಲ ಅದೇಕೊ ದೋಣಿ ಅಲ್ಲಾಡಿತು ಜಾತಿ ಮತವೆಂಬ ಸುಳಿಗೆ ಸಿಲುಕಿ
ಪ್ರೀತಿಯ ಹುಟ್ಟು ಹಾಕಿದವನೆ ಆ ಸುಳಿಗೆ ಸಿಲುಕಿ ಹೆದರಿ ನಾವೆಯನ್ನು ಹಿಂದೆ ತಿರುಗಿಸಿದ ಮುಂದೆ ಸಾಗಲು ಗೋಗರೆದರು ಕೇಳದೆ ಪ್ರಶ್ನೆ ಕೇಳಿದೆ ಅವನಿಗೆ
ಇಷ್ಟೆನೋ ಪ್ರೀತಿ ದಡವ ಸೆರೆದ ಪ್ರೇಮದ ಅರಮನೆಗೆ ಹೋಗದೆ ಅವನೆಂದ ಪ್ರೀತಿಗಿಂತ ಜೀವ, ಜೀವನ ದೊಡ್ಡದು ನೆನಪುಗಳ ಮಟ್ಟ ಹಾಖಿ ಮತ್ತೊಂದು ದೋಣಿ ಸೇರಿಕೊ
ಆ ಸುಳಿಗೆ ಸಿಲುಕಿದ ದೋಣಿಯು ಮೌನದ ಪುಟಗಳ ಸೇರಿದೆ ಕಾಲಗತಿಸಿದರೂ ಹಾಳೆ ಕೀಲಲಾಗುತ್ತಿಲ್ಲ. ಹಾಗಾಗ ತೆರೆಯುತ್ತದೆ ಮನ ಕದಡುತ್ತದೆ.
-ಗಂಗಾದೇವಿ ಚಕ್ರಸಾಲಿ
ಗಂಗಾದೇವಿ ಚಕ್ರಸಾಲಿ ಅವರ ಒಲವಿನ ಕ್ಷೇತ್ರ ಸಾಹಿತ್ಯ. ಕವನ, ಕತೆ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ಕವನ ವಾಚನವನ್ನು ಮಾಡುತ್ತಾರೆ.
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.