Poem

ಪ್ರೀತಿಯ ಕನವರಿಕೆ

ಬರಡಾದ ಭುವಿಯಲ್ಲಿ
ಬೀಜ ಬಿತ್ತಬಹುದೇ?
ಬಂಡೆಯಂಥ ಹೃದಯದಲ್ಲಿ
ಪ್ರೀತಿ ಚಿಗುರಿಸಬಹುದೇ?
ಕಾಯುತಿದೆ ಈ ನನ್ನ ಹೃದಯ
ಪ್ರಶ್ನೋತ್ತರಗಳ ಸಮ್ಮಿಶ್ರಣದೊಳಗೆ
ಆದರೂ ನನ್ನಾಕೆಯ ಮನವ
ಓದಲಾಗದ ಪರಿತಾಪದೊಳಗೆ
ಮನದ ನೆನಪಿಂದು
ಪಕ್ಕದ ಹತ್ತಾರು ಮನೆಗಳನ್ನು
ದಾಟಿ ಸಾಗಿದೆ ಅವಳಿರುವಲ್ಲಿಗೆ
ಸಾಗಿದರೂ, ಓದಿದರೂ ತಿಳಿಯಲಾಗದ
ಆ ಗೂಢಾರ್ಥ ಬಂಧದೆಡೆಗೆ
ಏನಿದು? ಇಷ್ಟು ಕಾಡುತಿದೆಯಲ್ಲ
ಪ್ರತಿಕ್ಷಣವೂ ನೆನೆಸಿ ನೋಯಿಸುತಿದೆಯಲ್ಲ
ನಿಜ! ಇದು ಪ್ರೇಮವಲ್ಲ
ಪಾರಮಾರ್ಥಿಕ ಸಂಬಂಧದ ನಿಜ ಕುರುಹು

-ವಿದ್ವಾನ್ ಮಂಜುನಾಥ್ ಎನ್ ಪುತ್ತೂರು

ವಿದ್ವಾನ್ ಮಂಜುನಾಥ್ ಎನ್

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವೃತ್ತಿಪರ ಭರತನಾಟ್ಯ ಕಲಾವಿದರಾಗಿ ಕಲ್ಬುರ್ಗಿಯಲ್ಲಿ ನೆಲೆಸಿದ್ದಾರೆ.

More About Author