ಬಹಿರಂಗ ಶುದ್ಧಿ

Author : ನಾ. ಸೋಮೇಶ್ವರ

Pages 292

₹ 220.00




Year of Publication: 2014
Published by: ಷಡಕ್ಷರಿಸ್ವಾಮಿ ಡಿಗ್ಗಾಂವಕರ ಪ್ರಕಾಶನ
Address: ಕಲಬುರಗಿ
Phone: 9342356222

Synopsys

’ಬಹಿರಂಗ ಶುದ್ಧಿ’ ನಾಸೋಮೇಶ್ವರ ಅವರ ರಚನೆಯ ಶರೀರ ಸ್ವಚ್ಛತೆಗೊಂದು ಕೈಗನ್ನಡಿಯಾಗಿದೆ ಎಂದರು. ಲೇಖಕರಾದ ಡಾ.ನಾ ಸೋಮೇಶ್ವರ ಅವರು ವೃತ್ತಿಯಿಂದ ವೈದ್ಯರು.ಪ್ರವೃತ್ತಿಯಿಂದ ಬರಹಗಾರರು. ಬೆಂಗಳೂರಿನ ಚಂದನ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿರುವ 'ಥಟ್ ಅಂತ ಹೇಳಿ' ಕ್ವಿಜ್ ಕಾರ್ಯಕ್ರಮ ಲಿಮ್ಕಾ ದಾಖಲೆ ಮಾಡಿ ಗಿನ್ನಿಸ್ ದಾಖಲೆ ಮಾಡುವತ್ತ ಹೆಜ್ಜೆ ಹಾಕುತಿದೆ. ಇವರು ಬರೆದ 'ಬಹಿರಂಗ ಶುದ್ದಿ- ಶರೀರ ಸ್ವಚ್ಛತೆಗೊಂದು ಕೈಗನ್ನಡಿ' ಎನ್ನುವ ಈ ಪುಸ್ತಕ ಕನ್ನಡ ಮಾತ್ರವಲ್ಲ ಇಂಗ್ಲಿಷ್ ಭಾಷೆಯಲ್ಲೂ ಲಭ್ಯವಾಗದಂತಹ ಅಪರೂಪದ ಪುಸ್ತಕ.ಶರೀರ ಸ್ವಚ್ಛತೆಯೇನು ಮಹಾ!ಎಲ್ಲರಿಗೂ ಗೊತ್ತಿರುವಂತಹುದೇ ಎನ್ನುವ ಜನರು ಇದನ್ನೊಮ್ಮೆ ಓದಬೇಕು. ಆಗ ಅವರಿಗೆ' ತಮಗೆಷ್ಟು ತಿಳಿದಿರುವುದಕ್ಕಿಂತ ತಿಳಿಯಬೇಕಾದ್ದು ಬೆಟ್ಟದಷ್ಟಿದೆ' ಎನ್ನುವ ಸತ್ಯ ಮನವರಿಕೆಯಾಗುತ್ತದೆ.ಶರೀರ ಸ್ವಚ್ಛತೆಯು ಆರೋಗ್ಯದ ಅಡಿಗಲ್ಲು.ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ನೀಡಬಹುದಾದ ಉತ್ತಮ ಕೃತಿ ಎನ್ನುವುದು ಪ್ರಕಾಶಕರ ಮಾತು.

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books