ಕನ್ನಡ ಗ್ರಂಥೋದ್ಯಮ

Author : ಅರವಿಂದ ಮಾಲಗತ್ತಿ

Pages 81

₹ 25.00




Year of Publication: 1997
Published by: ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ
Address: ಮಾನಸ ಗಂಗೋತ್ರಿ ಕರ್ನಾಟಕ 570009\n

Synopsys

'ಯಥಾರಾಜ ತಥಾಪ್ರಜಾ' ಎನ್ನುವ ಮಾತನ್ನು ಸ್ವಲ್ಪ ಬದಲಿಸಿ 'ಯಥಾ ಲೇಖಕ ತಥಾ ಪುಸ್ತಕ' ಎಂದು ಹೇಳಬಹುದು. ಇದೇ ಮಾತನ್ನು ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, “ಮಸ್ತಕವಿದ್ದಂತೆ ಪುಸ್ತಕ, ಕೃತಿಕಾರನ ಚಿಂತನೆಗೆ ಅನುಗುಣವಾಗಿ ಪುಸ್ತಕ ರೂಪುಗೊಳ್ಳುತ್ತದೆ. ಹಾಗೆಯೇ ಓದುಗರ ಅಭಿರುಚಿಗೆ ತಕ್ಕಂತೆಯೇ ಪ್ರಸ್ತಕಗಳ ಆಯ್ಕೆಯೂ ಇರುತ್ತದೆ. ಪುಸ್ತಕದಲ್ಲಿಯ ಒಂದು ವಿಚಾರವೆಂದರೆ 'ಪು' ಇದ್ದಹಾಗೆ, “ಪೂ' ಎಂದರೆ 'ಹೂವು, ಈ ಹೂವು ಬ್ರಹ್ಮನ ಸೃಷ್ಟಿ ಎನ್ನುವುದು ಪುರಾಣದ ಕಲ್ಪನೆ, ಬ್ರಹ್ಮನೂ ಪುರಾಣದ ವ್ಯಕ್ತಿಯೇ ಆದರೂ ಈತ ಬುದ್ದಿಗೆ ಸಂಕೇತ. ಯಾವುದೇ ಒಂದು ವಿಚಾರ ಹೂವಿನಷ್ಟೇ  ಕೋಮಲವಾದುದು. ಎಂಥ ಹೂಗಳನ್ನು ಸೇರಿಸಿ ನೀವು ಮಾಲೆ ಮಾಡುತ್ತೀರೋ ಅಂತಹದೇ ಪುಸ್ತಕ ರೂಪುಗೊಳ್ಳುತ್ತದೆ. ಬಹುಸಂಖ್ಯಾತ ವರ್ಗದ ಅಭಿರುಚಿಯಂತೆ ಸಮಾಜವೂ ರೂಪ ತಾಳುತ್ತದೆ. ಸಮಾಜವನ್ನು ಕಟ್ಟುವಲ್ಲಿ ಕೆಡುಹುವಲ್ಲಿ ಅಸ್ತ್ರದಂತೆ ಬಳಕೆಯಾಗುತ್ತದೆ. ಹೀಗಾಗಿ ಪುಸ್ತಕಗಳು ಪುಸ್ತಕವೆಂಬ ಅಸ್ತ್ರವನ್ನು ನಾವು ಬಳಸಿಕೊಳ್ಳುವ ರೀತಿಯಲ್ಲಿದೆ, ಓದುಗರೇ ದೇವರು” “ಗ್ರಂಥದಾನ ಗೋದಾನಕ್ಕಿಂತ ಮಿಗಿಲು? ಎಂಬ ಸೂತ್ರವನ್ನು ಬಳಕೆಗೆ ತರುವ ಇಂಥ ಅಗತ್ಯವಿದೆ. ದೇವರನ್ನು ನಂಬಿದವರು ನಂಬದವರನ್ನೂ ಈ ನೆಲೆಯಿಂದ ಬಳಸಿಕೊಳ್ಳ ಬೇಕಾಗಿದೆ ಎನ್ನುತ್ತಾರೆ ಅರವಿಂದ ಮಾಲಗತ್ತಿ.

About the Author

ಅರವಿಂದ ಮಾಲಗತ್ತಿ
(01 August 1956)

ಡಾ.ಅರವಿಂದ ಮಾಲಗತ್ತಿಯವರು 01-08-1956ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.  ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ...

READ MORE

Related Books