ಸಕಾಲ: ಕರ್ನಾಟಕದಲ್ಲಿ ನಾಗರಿಕ ಸೇವೆಗಳ ಹಕ್ಕು

Author : ವೈ.ಜಿ.ಮುರಳೀಧರನ್

Pages 96

₹ 50.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಸಕಾಲ: ಕರ್ನಾಟಕದಲ್ಲಿ ನಾಗರಿಕ ಸೇವೆಗಳ ಹಕ್ಕು’ ಕೃತಿಯು ನಾಗರಿಕರ ಕೈಪಿಡಿಯಾಗಿದೆ. ಕೃತಿಯ ಲೇಖಕ ವೈ.ಜಿ. ಮುರಳೀಧರ ಅವರು ನಾಗರಿಕರಿಗೆ ಸರಕಾರಿ ಕಛೇರಿಗಳಲ್ಲಿ ನಿಗದಿಪಡಿಸಿದ ಅವಧಿಯೊಳಗೆ ವಿಳಂಬವಿಲ್ಲದೆ ಸೇವಾ ಸೌಕರ್ಯ ಒದಗಿಸುವ ಯೋಜನೆಯೊಂದು ಬಂದಿದೆ – ಅದೇ ಸಕಾಲ. ಬ್ರಿಟನ್‌ನಲ್ಲಿ ಮೊದಲು ಅಂಗೀಕಾರವಾಗಿ ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿದು ಜಾರಿಯಲ್ಲಿದ್ದು ಉತ್ತಮ ಪರಿಣಾಮ ಬೀರಿದೆ. ನಮ್ಮಲ್ಲಿ ಕಾನೂನುಗಳೇನೋ ತುಂಬಾ ಚೆನ್ನಾಗಿದ್ದು, ಅವುಗಳ ಉದ್ದೇಶವೂ ಜನಸೇವೆಯೇ ಅಚ್ ಆಗಿದೆ. ಆದರೇನು ಮಾಡುವುದು – ಪರಿಹರಿಸಲಾಗದ ಕಗ್ಗಂಟನ್ನು ಸೃಷ್ಟಿಸುವ ಶಕ್ತಿಗಳಿದ್ದಾವಲ್ಲ! ಅಪ್ರಾಮಾಣಿಕ, ಅಸಮರ್ಥ ಅಧಿಕಾರಿಗಳು ಆಡಳಿತ ವ್ಯವಸ್ಥೆಯಲ್ಲಿ ನೇಮಕಗೊಂಡು ಕಾನೂನೊಂದು ಜಾರಿಗೊಳ್ಳುವಲ್ಲಿ, ನಿರ್ವಹಣೆಯಲ್ಲಿ ಗೊಂದಲವೇರ್ಪಟ್ಟು ವೈಫಲ್ಯವುಂಟಾಗುತ್ತದೆ. ಇದನ್ನು ತಡೆಯಲು ಸಾರ್ವಜನಿಕರು ತಮಗೆ ನೀಡಲಾದ ಹಕ್ಕುಗಳನ್ನು ಅರಿತುಕೊಂಡು ಬುದ್ದಿವಂತರಾಗಿ ವರ್ತಿಸಬೇಕಾಗುತ್ತದೆ. ಈಗ ಬಂದಿರುವ ಕಾನೂನನ್ನು ಹೇಗೆ ಉಪಯೋಗಿಸಬೇಕು, ಅದರಲ್ಲಿರುವ ವಿವರಗಳೇನು, ಇದರಲ್ಲಿ ನಾಗರಿಕ ಹಕ್ಕುಗಳೇನೇನಿವೆಯೆಂದು ತಿಳಿಸುವ ಪುಸ್ತಕವಿದು.

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Reviews

(ಹೊಸತು, ಸಪ್ಟೆಂಬರ್ 2012, ಪುಸ್ತಕದ ಪರಿಚಯ)

ಪೂರ್ಣಚಂದ್ರ ತೇಜಸ್ವಿ ತಬರನ ಕಥೆ ಬರೆದು ಕಾಸರವಳ್ಳಿ ಅದನ್ನು ಚಲನಚಿತ್ರವಾಗಿಸಿ, ಇಂದಿರಾಗಾಂಧಿ ವೀಕ್ಷಿಸಿ, ಸರ್ಕಾರಿ ಕಛೇರಿಗಳ ಕಾರ್ಯವೈಖರಿಗೆ ಛೀಮಾರಿ ಹಾಕಿ, ಕಾರ್ಮಿಕರ ಭವಿಷ್ಯನಿಧಿ ಕೈಸೇರಲು ಗಡುವು ನಿಗದಿಪಡಿಸಿದ್ದು - ಈ ಹಳೆಯ ಕಥೆ ಎಲ್ಲ ನಮ್ಮ ದೇಶದ್ದೆ! ಇದೀಗ ನಾಗರಿಕರಿಗೆ ಸರಕಾರಿ ಕಛೇರಿಗಳಲ್ಲಿ ನಿಗದಿಪಡಿಸಿದ ಅವಧಿಯೊಳಗೆ ವಿಳಂಬವಿಲ್ಲದೆ ಸೇವಾ ಸೌಕರ್ಯ ಒದಗಿಸುವ ಯೋಜನೆಯೊಂದು ಬಂದಿದೆ – ಅದೇ ಸಕಾಲ. 'ನಾಗರಿಕರ ಸೇವೆಗಳ ಖಾತರಿ ಅಧಿನಿಯಮ – 2011" ಎಂಬುದು ಈ ಸನ್ನದಿನ ಹೆಸರು. ಬ್ರಿಟನ್‌ನಲ್ಲಿ ಮೊದಲು ಅಂಗೀಕಾರವಾಗಿ ಪ್ರಪಂಚವಾದ್ಯಂತ ವಿವಿಧ ದೇಶಗಳಲ್ಲಿದು ಜಾರಿಯಲ್ಲಿದ್ದು ಉತ್ತಮ ಪರಿಣಾಮ ಬೀರಿದೆ. ನಮ್ಮಲ್ಲಿ ಕಾನೂನುಗಳೇನೋ ತುಂಬಾ ಚೆನ್ನಾಗಿದ್ದು, ಅವುಗಳ ಉದ್ದೇಶವೂ ಜನಸೇವೆಯೇ ಅಚ್ ಆಗಿದೆ. ಆದರೇನು ಮಾಡುವುದು – ಪರಿಹರಿಸಲಾಗದ ಕಗ್ಗಂಟನ್ನು ಸೃಷ್ಟಿಸುವ ಶಕ್ತಿಗಳಿದ್ದಾವಲ್ಲ! ಅಪ್ರಾಮಾಣಿಕ, ಅಸಮರ್ಥ ಅಧಿಕಾರಿಗಳು ಆಡಳಿತ ವ್ಯವಸ್ಥೆಯಲ್ಲಿ ನೇಮಕಗೊಂಡು ಕಾನೂನೊಂದು ಜಾರಿಗೊಳ್ಳುವಲ್ಲಿ, ನಿರ್ವಹಣೆಯಲ್ಲಿ ಗೊಂದಲವೇರ್ಪಟ್ಟು ವೈಫಲ್ಯವುಂಟಾಗುತ್ತದೆ. ಇದನ್ನು ತಡೆಯಲು ಸಾರ್ವಜನಿಕರು ತಮಗೆ ನೀಡಲಾದ ಹಕ್ಕುಗಳನ್ನು ಅರಿತುಕೊಂಡು ಬುದ್ದಿವಂತರಾಗಿ ವರ್ತಿಸಬೇಕಾಗುತ್ತದೆ. ಈಗ ಬಂದಿರುವ ಕಾನೂನನ್ನು ಹೇಗೆ ಉಪಯೋಗಿಸಬೇಕು, ಅದರಲ್ಲಿರುವ ವಿವರಗಳೇನು, ಇದರಲ್ಲಿ ನಾಗರಿಕ ಹಕ್ಕುಗಳೇನೇನಿವೆಯೆಂದು ತಿಳಿಸುವ ಪುಸ್ತಕವಿದು. ಶ್ರೀ ವೈ. ಜಿ. ಮುರಳೀಧರ ನಾಗರಿಕರಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

Related Books