ಕೆ.ಎಸ್.ನರಸಿಂಹಸ್ವಾಮಿ ಸಾಹಿತ್ಯ ಸೂಚಿ

Author : ಶ್ರೀಧರ ಹೆಗಡೆ ಭದ್ರನ್‍

Pages 84

₹ 60.00




Year of Publication: 2020
Published by: ಕೆ.ಎಸ್. ನಪಸಿಂಹಸ್ವಾಮಿ ಟ್ರಸ್ಟ್ (ರಿ)
Address: 22/6, ಪೂರ್ವ ಆಂಜನೇಯ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9916796832

Synopsys

‘ಕೆ.ಎಸ್.ನರಸಿಂಹಸ್ವಾಮಿ ಸಾಹಿತ್ಯ ಸೂಚಿ’ ಲೇಖಕ ಶ್ರೀಧರ ಹೆಗಡೆ ಭದ್ರನ್ ಅವರು ಸಂಪಾದಿಸಿರುವ ‘ಕೆ.ಎಸ್.ನ ಕಾವ್ಯ-ಗದ್ಯ-ಅನುವಾದ ಸಾಹಿತ್ಯ ಕೃತಿಗಳ ವಿವರ’. ಈ ಕೃತಿಯನ್ನು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಪ್ರಕಟಿಸಿದ್ದು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಕೃತಿಯ ಪ್ರಧಾನ ಸಂಪಾದಕರಾಗಿದ್ದಾರೆ. ಇದುವರೆಗೆ ಕೆ.ಎಸ್.ನ ಅವರ 17 ಕವನ ಸಂಕಲನಗಳು ಪ್ರಕಟವಾಗಿವೆ. ಮಲ್ಲಿಗೆಯ ಮಾಲೆ ಎಂಬ ಹೆಸರಿನಲ್ಲಿ ಅವರ ಸಮಗ್ರ ಕಾವ್ಯ ಸಂಪುಟ ಹಲವಾರು ಮುದ್ರಣಗಳನ್ನು ಕಂಡಿದೆ. ಮೈಸೂರ ಮಲ್ಲಿಗೆಯಂತೂ ಕನ್ನಡ ಪ್ರಕಟಣಾ ಪ್ರಪಂಚದಲ್ಲಿ ಅತಿ ಹೆಚ್ಚು ಮುದ್ರಣ ಕಂಡ ಕವನ ಸಂಕಲನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಯ್ದ ಕವನಗಳ ಹಲವು ಸಂಪುಟಗಳು ಪ್ರಕಟವಾಗಿವೆ. ಕವಿತೆಯೊಂದಿಗೆ ಗದ್ಯ ಸಾಂಗತ್ಯವನ್ನೂ ಹೊಂದಿದ್ದ ಕೆ.ಎಸ್.ನ ಒಟ್ಟೂ ಐದು ಗದ್ಯ ಬರಹಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಉಪವನ ಎಂಬ ಪ್ರಬಂಧ ಸಂಕಲನ ಕನ್ನಡದ ಮಹತ್ವದ ಪ್ರಬಂಧಗಳ ಕೃತಿಗಳ ಸಾಲಿಗೆ ಸೇರುತ್ತದೆ. ವಿ.ಸೀ.ಯವರ ವ್ಯಕ್ತಿಚಿತ್ರ ಹಾಗೂ ನುಡಿ ಮಲ್ಲಿಗೆ ಮತ್ತು ಸಿರಿ ಮಲ್ಲಿಗೆ ಎಂಬೆರಡು ಅನುಭವ ವಿಶಿಷ್ಟ ಕೃತಿಗಳು ಕೆ.ಎಸ್.ನ ಕಿರೀಟದಲ್ಲಿವೆ. ಅಂತಹ ಕೆ.ಎಸ್.ನ ಕಾವ್ಯ-ಗದ್ಯ-ಅನುವಾದ ಸಾಹಿತ್ಯ ಕೃತಿಗಳ ವಿವರವನ್ನು ಈ ಕೃತಿ ಒಳಗೊಂಡಿದೆ.

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books