ಕೊರೋನ ತಂದ ಅನಿವಾರ್ಯತೆಗಳು

Author : ಅಮ್ಮಸಂದ್ರ ಸುರೇಶ್

Pages 96

₹ 110.00




Year of Publication: 2021
Published by: ಸಿರಿ ಸಮೃದ್ಧಿ ಪ್ರಕಾಶನ
Address: # 315. ಎಚ್ ಪಿಓ ಮತ್ತು ಆರ್ ಎಂಎಸ್ ಬಡಾವಣೆ, ಶಕ್ತಿನಗರ, ಮೈಸೂರು-570029
Phone: 919448402346

Synopsys

ಡಾ. ಅಮ್ಮಸಂದ್ರ ಸುರೇಶ್ ಅವರ ಕೃತಿ-ಕೊರೋನ ತಂದ ಅನಿವಾರ್ಯತೆಗಳು. ಕೋವಿಡ್-19 ದೇಶದ ವಿವಿಧ ಕ್ಷೇತ್ರದ ಮೇಲೆ ಬೀರಿದ ಪರಿಣಾಮಗಳ ಕುರಿತು ವಿವರಗಳನ್ನು ಈ ಪುಸ್ತಕ ಒದಗಿಸುತ್ತದೆ. ಉದಯಕಾಲ ದಿನಪತ್ರಿಕೆಯಲ್ಲಿ ಪ್ರಕಟವಾದ 22 ಲೇಖನಗಳ ಸಂಗ್ರಹವಿದು.  ಸ್ವರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವವರಿಗೆ ಹಾಗೂ ಸಾಮಾನ್ಯ ಜ್ಞಾನದ ಕುರಿತು ಆಸಕ್ತಿಯುಳ್ಳವರಿಗೆ ಉತ್ತಮವಾದ ಮಾಹಿತಿಗಳನ್ನು ಒದಗಿಸುತ್ತದೆ. ಶಿಕ್ಷಣ, ಪ್ರವಾಸ, ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೃಷಿ, ಡಿಜಿಟಲ್ ಮಾಧ್ಯಮ ಹೀಗೆ ಎಲ್ಲಾ ರಂಗಗಳ ಮೇಲೆ ಕೊರೋನಾ ಬೀರಿದ ಪರಿಣಾಮಗಳನ್ನು ಅಂಕಿ-ಅಂಶಗಳ ಸಮೇತ ಲೇಖಕರು ವಿವರಿಸಿದ್ದಾರೆ

 

About the Author

ಅಮ್ಮಸಂದ್ರ ಸುರೇಶ್

ಅಮ್ಮಸಂದ್ರ ಸುರೇಶ್  ಅವರು ಮೂಲತಃ  ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ  ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ  ಪೂರ್ಣಗೊಳಿಸಿದರು. ಪಿ,ಹೆಚ್ ಡಿಯನ್ನು   ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ...

READ MORE

Related Books