ಬಾನಂಗಳದಲ್ಲಿ

Author : ಶೈಲಜಾ ಪ್ರಸಾದ್

Pages 136

₹ 95.00




Year of Publication: 2015
Published by: ವ್ಯಾಸ ಪಬ್ಲಿಕೇಷನ್ಸ್
Address: ನಂ: 9ನೇ ಮುಖ್ಯರಸ್ತೆ, ಪೈಪ್ ಲೇನ್ ರಸ್ತೆ, ಹನುಮಂತ ನಗರ, ಬೆಂಗಳೂರು-560019
Phone: 9880889756

Synopsys

ಲೇಖಿಕಾ ಶೈಲಜಾ ಪ್ರಸಾದ್ ಅವರು ಕಾಲಕಾಲಕ್ಕೆ ಪತ್ರಿಕೆಗಳಿಗೆ ಬರೆದ ಬರೆಹಗಳ ಸಂಗ್ರಹ ಕೃತಿ-ಬಾನಂಗಳದಲ್ಲಿ. ಸುಧಾ, ಸಖಿ, ಕರ್ಮವೀರ ಸೇರಿದಂತೆ ಇತರೆ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಇಲ್ಲಿ ಸಂಕಲಿಸಿದ್ದರಿಂದ ವಸ್ತು ವೈವಿಧ್ಯತೆ ಇದೆ. ಜೊತೆಜೊತೆಯಲ್ಲಿ, ಕಾಫಿ ಜೊತೆಯಲ್ಲಿ, ನಮಗೆ ಪೌರಪ್ರಜ್ಞೆ ಇದೆಯೆ?, ಎಚ್ಚರ ಹುಡುಗಿ ಎಚ್ಚರ, ಕಳ್ಳುಬಳ್ಳಿ, ಅಬ್ದುಲ್ ಕಲಾಂ ಅವರ ಲೇಖನ ಆಧರಿತ ಬರೆಹ -ಈ ಸಮಯ ಯುವ ಸಮಯ -ಈ ಎಲ್ಲ ಲೇಖನಗಳು ಭಾಷೆ, ವಿಚಾರ, ಶೈಲಿ, ಸಂದೇಶ, ಕಳಕಳಿ ದೃಷ್ಟಿಯಿಂದ ಓದುಗರ ಗಮನ ಸೆಳೆಯುತ್ತವೆ. 

About the Author

ಶೈಲಜಾ ಪ್ರಸಾದ್
(07 November 1961)

ಶೈಲಜಾ ಪ್ರಸಾದ್ ಅವರು ಮೂಲತಃ ಮೈಸೂರಿನ ಕಿಕ್ಕೇರಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ಸದಸ್ಯರು. ಮಳೆ ನಿಂತ ಮೇಲೆ-ಕಥಾ ಸಂಕಲನ. ಬಾನಂಗಳದಲ್ಲಿ-ಪ್ರಬಂಧ ಸಂಕಲನ. ಅಗೋಚರ-ಇವರ ಕಾದಂಬರಿ. ಬೆಂಗಳೂರು ಆಕಾಶವಾಣಿಯಲ್ಲಿ ‘ಕರುಣಾಳು ಬಾ ಬೆಳಕೆ’ ಕಥೆ ವಾಚನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಲೇಖಿಕಾ ಸಾಹಿತ್ಯ ವೇದಿಕೆಯಿಂದ ಸನ್ಮಾನ, ಅಕ್ಕನ ಮನೆ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ದೇಸಿ ದಿಬ್ಬಣ ಪ್ರಶಸ್ತಿ-2020ರಲ್ಲಿ ಇವರ ಪ್ರಬಂಧಕ್ಕೆ ಬಹುಮಾನ, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸೇವಾ ರತ್ನ ಪ್ರಶಸ್ತಿ ಲಭಿಸಿದೆ. ...

READ MORE

Related Books