ಶಬ್ದಗುಣ

Author : ವಸಂತ ಬನ್ನಾಡಿ

Pages 160




Year of Publication: 2007
Published by: ಶಬ್ದಗಣ ಬಳಗ
Address: ವಿಠಲವಾಡಿ, ಕುಂದಾಪುರ-576201

Synopsys

'ಶಬ್ದಗುಣ' ವಸಂತ ಬನ್ನಾಡಿ ಅವರ ಅರೆವಾರ್ಷಿಕ ಪತ್ರಿಕೆಯಾಗಿದೆ. ತನ್ನ ಪ್ರತೀ ಸಂಚಿಕೆಯಲ್ಲಿ ಸಾಂಸ್ಕೃತಿಕವಾಗಿ ಮುಖ್ಯರಾದ ವ್ಯಕ್ತಿಗಳ ಜೊತೆಗಿನ ದೀರ್ಘವಾದ ಸಂದರ್ಶನವನ್ನು ಪ್ರಕಟಿಸುವ ಇರಾದೆ ಹೊಂದಿದೆ. ಈ ಸಂಚಿಕೆಯಲ್ಲಿ ಇಬ್ಬರು ಮಹತ್ತ್ವದ ರಂಗ ನಿರ್ದೇಶಕರಾದ ಸುರೇಶ ಆನಗಳ್ಳಿ ಹಾಗೂ ಗೋಪಾಲಕೃಷ್ಣ ನಾಯಿರಿ ಅವರ ಸಂದರ್ಶನವಿದೆ. ಆನಗಳ್ಳಿ ಕಳೆದ ಮೂವತ್ತು ವರ್ಷಗಳಿಂದ ನಾಟಕವಾಡಿಸುತ್ತಾ ಬಂದಿರುವವರು. ಈಚಿನ ಐದಾರು ವರ್ಷಗಳಲ್ಲಿ ಸತತವಾಗಿ ನಾಟಕಗಳನ್ನು ನಿರ್ದೇಶಿಸುತ್ತಾ ತನ್ನದೇ ಆದ 'ಈಡಿಯಮ್'ನ್ನು ಕಂಡುಕೊಂಡವರು. ಕನ್ನಡ ರಂಗಭೂಮಿಯಲ್ಲಿ ನಾಯಿರಿ ನಾಟಕ ಕಟ್ಟುವ ರೀತಿ ಅವರದ್ದೇ ಮಾದರಿ ಎಂದರೂ ಸರಿಯೇ. ಈ ಇಬ್ಬರ ಬಗೆಗಿನ ಎಸ್. ಶಿವಪ್ರಕಾಶ್ ಮತ್ತು ಕ ವೆಂ. ರಾಜಗೋಪಾಲ್ ಅವರ ಲೇಖನಗಳೂ ಈ ಸಂಚಿಕೆಯಲ್ಲಿದೆ. 'ಶಬ್ದಗುಣ, ತನ್ನ ಸಂಚಿಕೆಯಲ್ಲಿ ಒಂದಾದರೂ ಹೊಸ ಕತೆಯನ್ನು ಪ್ರಕಟಿಸುವ ಉದ್ದೇಶ ಹೊಂದಿದೆ. ಈ ಸಂಚಿಕೆಯಲ್ಲಿ ಎನ್ ರಾಮಚಂದ್ರ ಅವರು ಬರೆದಿರುವ ಏನಿದೇನಿದು ಪ್ರಯತ್ನವೇ... ಕಥೆ ಇದೆ. ಎಂಬತ್ತರ ದಶಕದಲ್ಲಿಯೇ ತಮ್ಮ ಮೊದಲ ಕಥಾಸಂಕಲನವನ್ನು ಕಳಿಸಿದ್ದ ಹಿರಿಯ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರ ಅವರು ಈಚೆಗೆ ಬರೆದಿರುವ ಹೊಸ ಕತೆ ಇದಾಗಿದೆ.

About the Author

ವಸಂತ ಬನ್ನಾಡಿ
(20 September 1955)

ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್‌ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ. ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ...

READ MORE

Related Books