ಪ್ರಧಾನಿ ದೇವೇಗೌಡ ಪತ್ರಿಕೆಗಳಲ್ಲಿ

Author : ಸೊಂದಲಗೆರೆ ಲಕ್ಷ್ಮೀಪತಿ

Pages 656

₹ 800.00




Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: # ಚಂದ್ರಾ ಲೇಔಟ್ ಶಾಖೆ , ವಿಜಯನಗರ, ಬೆಂಗಳೂರು

Synopsys

ಕರ್ನಾಟಕದಿಂದ ಭಾರತದ ಪ್ರದಾನಿಯಾದವರ ಪೈಕಿ ಎಚ್.ಡಿ. ದೇವೇಗೌಡರು ಮೊದಲಿಗರು. ಅವರ ಚಾಣಾಕ್ಷ ರಾಜಕಾರಣವು ಭಾರತೀಯ ರಾಜಕೀಯ ವಲಯದಲ್ಲಿ ಅಧ್ಯಯನ ಯೋಗ್ಯವಾಗಿದೆ. ಸುಮಾರು 25 ವರ್ಷಗಳ ಹಿಂದೆ  ಪತ್ರಿಕೆಗಳಲ್ಲಿ ಪ್ರಕಟವಾದ ದೇವೇಗೌಡರಿಗೆ ಸಂಬಂಧಿಸಿದ  ಸುದ್ದಿಗಳ ತುಣುಕುಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ ಇದು. ಲೇಖಕ ಸೊಂದಲಗೆರೆ ಲಕ್ಷ್ಮಿಪತಿ ಅವರು ಕೃತಿಯ ಸಂಪಾದಕರು. ಗ್ರಾ,ಮೀಣ ಭಾರತದ ಸ್ವರೂಪ-ಅಭಿವೃದ್ಧಿ-ತಾಂತ್ರಿಕತೆಗೆ ಪೂರಕವಾಗುವ ಯೋಜನೆಗಳು, ಎಚ್.ಡಿ. ದೇವೇಗೌಡರ ವ್ಯಕ್ತಿಗತ ವಿಚಾರಗಳು, ಅವರ ಸಾಮಾಜಿಕ ವಿಚಾರಗಳು, ದೂರದೃಷ್ಟಿ., ದೇಶದ ಪರಿಕಲ್ಪನೆ, ಜನಪರ ಯೋಜನೆಗಳು, ದೇಶದ ಸ್ವಾತಂತ್ಯ್ರ ಹೋರಾಟದ ಚಿತ್ರಣ, ಕೋಮು ಸೌಹಾರ್ದತೆ ಇತ್ಯಾದಿ ವಿಷಯಗಳ ಮೇಲಿನ ಸ್ಥೂಲ ನೋಟವನ್ನು ಈ ಕೃತಿಯು ಒಳಗೊಂಡಿದೆ.

About the Author

ಸೊಂದಲಗೆರೆ ಲಕ್ಷ್ಮೀಪತಿ

ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...

READ MORE

Related Books