ಸಾಹಿತ್ಯ ಸಂವಾದ

Author : ರಾಘವೇಂದ್ರ ಪಾಟೀಲ

Pages 124

₹ 250.00




Year of Publication: 2002
Published by: ಸಂವಾದ ಪ್ರಕಾಶನ
Address: ಮಲ್ಲಾಡಿಹಳ್ಳಿ ಚಿತ್ರದುರ್ಗ ಜಿಲ್ಲೆ, 577531

Synopsys

‘ಸಾಹಿತ್ಯ ಸಂವಾದ’ ಕೃತಿಯು ರಾಘವೇಂದ್ರ ಪಾಟೀಲ ಅವರ ದ್ವಿಮಾಸಿಕ ಪತ್ರಿಕೆ, ಸಂವಾದ ಸಂಚಯ, ಕನ್ನಡ ಸಾಹಿತ್ಯ ವಿಚಾರಗಳನ್ನು ಒಳಗೊಂಡ ಕೃತಿಯಾಗಿದೆ. ಈ ಸಂಚಿಕೆಯಲ್ಲಿ ಕಾವ್ಯ :ಚಂದ್ರಶೇಖರ ತಾಳ್ಯರ ಮೂರು ಕವಿತೆಗಳು, ತೇರು ಕಾದಂಬರಿಯ ಮೊದಲ ಭಾಗ (ರಾಘವೇಂದ್ರ ಪಾಟೀಲ), ಸೇಡಿಯಾಪು ಕರಷ್ಣಭಟ್ಟರ ಕಥೆಗಳು (ತಾಳ್ತಜೆ ವಸಂತಕುಮಾರ), ಹರಿಹರದಲ್ಲಿ ಸ್ತ್ರೀ ಮತ್ತು ಕಾಮದ ನೆಲೆಗಳು (ರಾಮಲಿಂಗಪ್ಪ ಟಿ. ಬೇಗೂರು), ಸಮಾಜವಾದಿ ತತ್ವದ ತಂತ್ರಜ್ಞಾನ ನೀತಿ ( ಜಿ.ಎನ್. ಮಲ್ಲಿಕಾರ್ಜುನ), ಕಲೆ ಎಂದರೆ ಏನು? (ಚಂದ್ರಕಾಂತ ಕುಸನೂರು), ಸಾಹಿತ್ಯ ಮತ್ತು ಧರ್ಮ : ಅಂತರ ಮತ್ತು ಅಂತರ್ ಸಂಬಂಧ (ಕಾಂ. ಶ್ರೀನಿವಾಸಮೂರ್ತಿ), ಕಂಬಾರರ ನಾಟಕಗಳು : ಆಧುನಿಕ ಬದುಕಿನ ಸಂಘರ್ಷಗಳು ಅಥವಾ ‘ಹೇಳತೇನ ಕೇಳ’ ದ ನವ ಪುರಾಣಗಳು (ಶಿವಾ ರೆಡ್ಡಿ), ಹೊಸ ಓದು : ಗಣೆಯ ನಾದ/ ಶಂಕರ ಕಟಗಿ (ಪ್ರಹ್ಲಾದ್ ಅಗಸನಕಟ್ಟೆ), ಕೈಮರದ ನೆರಳಲ್ಲಿ (ಕೆ.ಎಸ್. ನರಸಿಂಹಸ್ವಾಮಿ) ಚಂದ್ರಶೇಖರ ತಾಳ್ಯ, ಸಂಪಾದಕನ ಟಿಪ್ಪಣಿಗಳನ್ನು ಒಳಗೊಂಡಿದೆ.

About the Author

ರಾಘವೇಂದ್ರ ಪಾಟೀಲ
(16 April 1951)

ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ.  ‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ  ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.  ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ...

READ MORE

Related Books