ಚರಿತ್ರೆಗೊಂದು ಕಿಟಕಿ

Author : ವೈ.ಬಿ. ಕಡಕೋಳ

Pages 152

₹ 120.00




Year of Publication: 2016
Published by: ವಿಜಯಲಕ್ಷ್ಮಿ ಪ್ರಕಾಶನ
Address: # 657, ಕೂಗುಬಂಡೆ ರಸ್ತೆ, ಇ ಮತ್ತು ಎಫ್ ಬ್ಲಾಕ್, ಮೈಸೂರು

Synopsys

ಕನ್ನಡಪ್ರಭ (2009-10) ಹಾಗೂ ಇತರೆ ದಿನಪತ್ರಿಕೆಗಳಲ್ಲಿ ಸ್ಥಳನಾಮಗಳ ಕುರಿತು ವೈ.ಬಿ. ಕಡಕೋಳ ಅವರು ಬರೆದ ಬರಹಗಳ ಸಂಗ್ರಹ-ಚರಿತ್ರೆಗೊಂದು ಕಿಟಕಿ. ಸವದತ್ತಿ, ನವಿಲುತೀರ್ಥ, ಶಿರಸಂಗಿ, ಹೂಲಿ, ಪಟ್ಟದಕಲ್ಲು, ಹಂಪಿ, ತುಳಸೀಗೇರಿ, ಕೊಪ್ಪಳ, ಲಕ್ಕುಂಡಿ, ಆಚನೂರು, ಸೂಡಿ, ಮುನವಳ್ಳಿ, ಹುಬ್ಬಳ್ಳಿ, ಮುರಗೋಡ, ಮುನವಳ್ಳಿ ಹೀಗೆ ವಿವಿಧ ಊರುಗಳ ಐತಿಹಾಸಿಕ- ಪೌರಾಣಿಕ ಹಿನ್ನೆಲೆಯ ಮಾಹಿತಿಯೊಂದಿಗಿನ ವಿವರಣೆಯು ಈ ಕೃತಿಯಲ್ಲಿವೆ. ಸ್ಥಳನಾಮ, ಸ್ಥಳೀಯ ಚರಿತ್ರೆ ಇತ್ಯಾದಿ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ-ಶಿಕ್ಷಕರಿಗೆ  ಈ ಕೃತಿಯು ಉಪಯುಕ್ತ ಆಕರ ಗ್ರಂಥವಾಗಿದೆ.

ಸಾಹಿತಿ ಆರ್.ಆರ್. ಸದಲಗಿ ಅವರು ಕೃತಿಗೆ ಮುನ್ನುಡಿ ಬರೆದು ‘ಅನೇಕ ಬರಹಗಳು ಚಿಕ್ಕದಾದರೂ ಗ್ರಾಮಗಳ ಸ್ಥಳ-ಪುರಾಣ-ಇತಿಹಾಸ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಗ್ರಾಮ ವೈಶಿಷ್ಟ್ಯಗಳನ್ನು ನೀಡಿದ್ದು, ಈ ಕೃತಿಯ ವಿಶೇಷ’ ಎಂದು ಪ್ರಶಂಸಿಸಿದ್ದಾರೆ.

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books