ಸರ್ವೇಜನಾಃ ಸುಖಿನೋ ಭವಂತು

Author : ಕುಮಾರ್ ಭದ್ರಾವತಿ

Pages 274

₹ 300.00




Year of Publication: 2022
Published by: ಮಂದಾರ ಪುಸ್ತಕ ಭಂಡಾರ
Address: ನಂ. 53, 5ನೇ ಟೆಂಪಲ್ ರಸ್ತೆ, ಸಿದ್ಧಾಂತಿ ಬ್ಲಾಕ್ ಮಲ್ಲೇಶ್ವರಂ, ಬೆಂಗಳೂರು 560003
Phone: 9880181671

Synopsys

ನಮ್ಮಲ್ಲಿ ಇಂದು ಹಿಂದೆಂದಿಗಿಂತಲೂ ಭ್ರಷ್ಟಾಚಾರ ಅತೀವವಾಗಿ ಆವರಿಸಿ ಜನಸಾಮಾನ್ಯರ ಮತ್ತು ಪ್ರಾಮಾಣಿಕರ ಬದುಕನ್ನು ನರಕದ ಕೂಪಕ್ಕೆ ತಟ್ಟಿರುವುದು ಅದರಲ್ಲೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಾಸಿಸುತ್ತಿರುವ ರೈತಾಪಿ ಜನಗಳಿಗೂ ತಿಳಿದಿರುವ ಸಂಗತಿಯಾಗಿದೆ. ಎಲ್ಲಿ ನೋಡಿದರೂ, ಯಾವ ಇಲಾಖೆಗಳಿಗೆ ಕಾಲಿಟ್ಟರೂ ಭ್ರಷ್ಟಾಚಾರ ಎಂಬ ಗುಮ್ಮ ಹತ್ತು ಹಲವು ವಿಧಗಳಲ್ಲಿ ಕಛೇರಿಗಳ ಯಾವುದೊ ಒಂದು ಮೂಲೆಯಲ್ಲಿ ಅಡಗಿ ಕುಳಿತಿಲ್ಲ. ಬದಲಿಗೆ ಅತ ಬಟಾಬಯಲಾಗಿದ್ದಾನೆ. ಇಂದು ಭ್ರಷ್ಟಾಚಾರ ಸಾರ್ವತ್ರಿಕವಾಗಿರುವುದು ದೇಶದ ಅರ್ಧ ಪತನಕ್ಕೆ  ಸಾಕ್ಷಿಯಾಗಿರುವುದನ್ನು ಎತ್ತಿ ಹಿಡಿಯುತ್ತದೆ. ಈ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದಾರೆ ಎನ್ನುವುದಂತೂ ಸತ್ಯದ ಸಂಗತಿಯಾಗಿದೆ. ಇಂತಹ ಅವ್ಯವಸ್ಥೆಯ ಅತೀವ ಬೆಳವಣಿಗೆಗೆ ಕಡಿವಾಣ ಹಾಕುವವರೂ ಭ್ರಷ್ಟರಾಗಿರುವುದಂತೂ ಅರಗಿಸಿಕೊಳ್ಳಲಾಗದ ದುರ್ದೈವದ ಸಂಗತಿ. ಕುಮಾರ್ ಭದ್ರಾವತಿಯವರ “ಸರ್ವೇಜನಾಃ ಸುಖಿನೋ ಭವಂತು' ಎಂಬ ಈ ಕಾದಂಬರಿಯಲ್ಲಿ ಇಂತಹ ಅನೇಕ ಪ್ರಸಂಗಗಳಿಗೆ ಇತಿಶ್ರೀ ಹಾಡುವ ಸಂಗತಿಗಳಿವೆ, ಲೇಖಕರ ಜಾಣತನ ಮತ್ತು ಅವಲಗೆ ಸಮಾಜದ ಅವ್ಯವಸ್ಥೆಯ ಬಗ್ಗೆ ರೋಷವಿರುವುದು ಅವರ ಬರವಣಿಗೆಯಲ್ಲಿ ಸ್ಪಷ್ಟಪಡಿಸುತ್ತದೆ. ಸಮಾಜದಲ್ಲಿನ ದ್ವಂದ್ವ ನಿಲುವುಗಳು ಅವರನ್ನು ಚಿಂತಿಸುವಂತೆ ಮಾಡಿದೆ ಎಂದು  ಹಿರಿಯ  ಸಾಹಿತಿ ದೊಡ್ಡರಂಗೇಗೌಡರು ಕುಮಾರ್‌ ಭದ್ರಾವತಿ ಅವರ ಕಾದಂಬರಿಯ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕುಮಾರ್ ಭದ್ರಾವತಿ
(22 August 1969)

ಕುಮಾರ್ ಭದ್ರಾವತಿ  ತಂದೆ  ದಿ. ನಿಂಗೇಗೌಡ ತಾಯಿ ದಿ. ಹೊಂಬಮ್ಮ. ಬಿ.ಎ, ಬಿ.ಲಿಬ್ ಸೈನ್ಸ್, ಎಂ.ಲಿಬ್ ಸೈನ್ಸ್ ವಿದ್ಯಾರ್ಹತೆ  ಪಡೆದು ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.  ಕರ್ನಾಟಕ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 40 ಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ರಂಗಭೂಮಿ ,ಸಂಪಾದಕೀಯ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.  ಕಾದಂಬರಿಗಳು  ಮೇಡಂ ಹೇಳಿದ ಕಥೆ (ಮಕ್ಕಳ ಕಾದಂಬರಿ) 1989, (2015 ರಲ್ಲಿ ಚಲನಚಿತ್ರವಾದ ಕಾದಂಬರಿ), ಮಿಸ್ಟರ್ ಎಕ್ಸ್ (ಪತ್ತೆದಾರಿ ಕಾದಂಬರಿ) 1990 , ಬಣ್ಣದ ಚಿಟ್ಟೆ (ಮಕ್ಕಳ ಸಾಹಿತ್ಯ) 1991 , ನಮ್ಮ ಚಂದಿರ (ಮಕ್ಕಳ ...

READ MORE

Related Books