Poem

ಅದುವೇ ಕನ್ನಡ ನಮ್ಮ ಕನ್ನಡ

ಭಾಷೆಯೊಂದು ಭಾವವಾಗಿ
ಭಾವೈಕ್ಯತೆಯ ಸಾರಿದೆ
ಕರೆದೆ ನಾನು ಅಮ್ಮನನ್ನು
ಅಲ್ಲಿ ಪ್ರೀತಿ ತುಂಬಿದೆ
ಎದೆಗೆ ಬಿದ್ದ ಅಕ್ಷರದ ಬೀಜವು
ಟಸಿಲೋಡೆದು ಕೂಗಿದೆ
ಅದುವೇ ಕನ್ನಡ ನಮ್ಮ ಕನ್ನಡ

ಪ್ರಾಂತ್ಯದಲ್ಲಿ ಹಲವು ಕವಲು
ಒಂದೇ ಬೇರ ಆಶ್ರಯಿಸಿದೆ
ಕವನ ನಾಟ್ಯ ಸಾಹಿತ್ಯ ಸಂಗೀತ
ನಿನ್ನ ಆಭರಣವಾಗಿ ವಿಜೃಂಭಿಸಿದೆ
ರಾಜ ರಾಜ್ಯಗಳ ವೈಭವವನ್ನು ಹೊತ್ತ ನಿನ್ನ
ಬಾಹುಗಳು ಬಲವಾಗಿದೆ
ಅದುವೇ ಕನ್ನಡ ನಮ್ಮ ಕನ್ನಡ

ಜ್ಞಾನಪೀಠ ಜ್ಞಾನದಾಸೋಹ
ನಿರಂತರವಾಗಿ ಸಾಗಿದೆ
ಅಲ್ಲಿ ಕಡಲು ಇಲ್ಲಿ ಬೆಟ್ಟ
ಸೌಂದರ್ಯವೇ ನಿನಗೆ ದಾಸಿಯಾಗಿದೆ
ಗಣಿಯು ನೀನು ಧಣಿಯು ನೀನು
ನಿನಗೆ ಯಾರ ಹಂಗಿದೆ
ಅದುವೇ ಕನ್ನಡ ನಮ್ಮ ಕನ್ನಡ

ಭುವನೇಶ್ವರಿಯ ಕಂದ ನೀನು
ಚಾಮುಂಡಿಯ ಆಶೀರ್ವಾದವಿದೆ
ಸ್ವಾಭಿಮಾನ ನಿನ್ನ ಉಸಿರು
ಆದಿ ಅಂತ್ಯ ನಿನಗೆ ಎಲ್ಲಿದೆ
ಸರಳ ಸುಂದರ ಮನೋಹರ ನೀನು
ನಿನ್ನ ಕಂಪು ಎಲ್ಲೆಡೆ ಪಸರಿಸಿದೆ
ಅದುವೇ ಕನ್ನಡ ನಮ್ಮ ಕನ್ನಡ


ಪ್ರದೀಪ್ ಬೇಲೂರು

ಆಡಿಯೋ
ವಿಡಿಯೋ

ಪ್ರದೀಪ್ ಬೇಲೂರು

ಲೇಖಕ ಪ್ರದೀಪ್ ಬೇಲೂರು ಅವರು ಮೂಲತಃ  ಹಾಸನ ಜಿಲ್ಲೆಯ ಬೇಲೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನ ಒರಾಕಲ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ ಅವರ ಹವ್ಯಾಸವಾಗಿದೆ.

ಕೃತಿಗಳು : ಎಲವೋ ವಿಭೀಷಣ (ಕಥಾ ಸಂಕಲನ), ಶತ್ರುಘ್ನ (ಕಾದಂಬರಿ) 

 

More About Author