Poem

ಅನ್ನದ ಜಯ

ಎದೆಯ ನೆತ್ತರಿನಲ್ಲಿ
ಬರೆದುಕೊಳ್ಳುತ್ತೇವೆ.
ನಮ್ಮ ಹೋರಾಟದ ಜಯವನ್ನು.

ಏಕೆಂದರೆ.
ಇದು ಈ ನೆಲದ
ಅನ್ನದ ಜಯ.

ಆದರೂ
ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ.
ಸಾವಿರ ಸಾವಿರ ಅನ್ನದಾತರ
ಬದುಕು, ಬಲಿದಾನವನ್ನು.

ಈಗಲಾದರೂ ಹೇಳಿ.
ನಿಮ್ಮ ಲಾಠಿ,ಬೂಟು,
ಬಂದೂಕು, ಜಲ ಫಿರಂಗಿಗಳಿಗೆ.

"ಸರ್ಕಾರ ರೊಕ್ಕ ಮುದ್ರಿಸಬಹುದು
ತುಂಡು ರೊಟ್ಟಿಯನ್ನಲ್ಲ"ವೆಂದು.

-ಅಲ್ಲಾಗಿರಿರಾಜ್ ಕನಕಗಿರಿ

ಅಲ್ಲಾಗಿರಿರಾಜ್ ಕನಕಗಿರಿ

ವೃತ್ತಿಯಿಂದ ಪತ್ರಕರ್ತರಾಗಿರುವ ಅಲ್ಲಾಗಿರಿರಾಜ ಅವರ ಕೊಪ್ಪಳ ಜಿಲ್ಲೆಯ ಕನಕಗಿರಿಯವರು. ಗಜಲ್‌ ಬರೆಯುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರ ’ಆಜಾದಿ ಗಜಲ್’, ಸುರೂರು ಗಜಲ್, ನೂರ್‌ ಗಜಲ್ ಕೃತಿಗಳು ಪ್ರಕಟವಾಗಿವೆ.

More About Author