Poem

ಆಶಯ

ತಾಯಿನುಡಿ ಸೇವೆಯಲ್ಲಿ ಕಳೆಯಲೆನ್ನಯ ಕಾಲ
ತಾಯಿನಾಡಿನ ಶ್ರೇಯಕಿರಲೆನ್ನ ಧ್ಯೇಯ

ನಾಡಿನುನ್ನತಿಯನ್ನಾ ನಾಡನುಡಿಯೇಳೆಯಿಂ
ನೋಡಲಾರ್ಪುದರಿಂದಲೆನ್ನ ತಾಯಿ
ನಾಡನುಡಿಯುನ್ನತಿಯ ಬಯಕೆಯಿಂದೆನ್ನ ತನು-
ಮನ-ಧನಗಳೇಗಳುಂ ಸವೆಯುತಿರಲಿ.

ಜಸದೆಸಕಜಾಲದಿಂ ದೂರವಿರಲೆನ್ನ ಮನ
ಮುಸುಕದಿರಲೆನ್ನ ಬಗೆ ಸ್ವಾರ್ಥತಮದಿಂ;
ಕುಸುಮವಾಸನೆವಿಸರದಂತೆನ್ನ ಜೀವನದ
ಪ್ರತಿಕೃತಿಗಳೆಸೆದಿರಲಿ ದೆಸೆದೆಸೆಯಲಿ,

ಸುಜಲದಿಂ ತವಿನ ಸುಫಲಂಗಳಿಂ ಪೋಷಿಸುವ
ಸಸ್ಯಶ್ಯಾಮಲೆ ಪ್ರೀತೆ ಭೂಮಾತೆಯ
ನಿಜಪಾದಕಮಲದರ್ಚನೆ ಸದಾ ಸುಮನದಿಂ
ದೊಗೆದ ಕೃತ್ಯುಸುಮದಿಂ ನಡೆಯುತಿರಲಿ.

ಜಯತು ಕರ್ನಾಟಕಂ ಜಯತು ಭಾರತ ಭೂಮಿ
ಜಯತು ಸಾರಸ್ವತೋದ್ಯೋಗದೆಸಕಂ;
ಜಯತು ಮಾತೆಯ ಬಂಧಮುಕ್ತಿಯೋಧರ ಚಾಗ
ಜಯ ಸದಾ ಜಯತು ಜಯ ಕರ್ನಾಟಕಂ,

- ಟಿ ನಾರಾಯಣಭಟ್ಟ

ವಿಡಿಯೋ
ವಿಡಿಯೋ

ಟಿ ನಾರಾಯಣಭಟ್ಟ

ಟಿ ನಾರಾಯಣಭಟ್ಟ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಸಾಧನೆಗೈದವರು.

More About Author