Poem

ಧ್ಯಾನವಿದು ಕನ್ನಡ

ಸವಿಜೇನ ನುಡಿಯನು
ಸವಿಯುವ ಬಾರಾ
ಕಂಪು ಸೂಸುವ ನುಡಿಯ
ಪರಿಮಳವ ಹರಡುವ ಬಾರಾ

ಇಂಪಾಗಿ ಕೇಳುಧ ನುಡಿಯ
ತಂಪಾಗಿ ಆಸ್ವಾದಿಸುವ ಬಾರಾ
ಸೊಂಪಾದ ಸಾಹಿತ್ಯ ರಾಶಿಯ
ಓದುವ ಒಂದಾಗಿ ಬಾರಾ

ಧ್ಯಾನವಿದು ಧ್ಯಾನಿಸುವ
ಜ್ಞಾನವಿದು ಜ್ಞಾನಿಸುವ
ತಾಣವಿದು ತಣಿಸುವ
ಭಾವವಿದು ಭಾವಿಸುವ

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author