Poem

 ಜಗದೊಳಗೆ ನಾನು !

ಕರ್ಣನಾಗಲಾರೆ;
ಭಾವಾನಾತ್ಮಕವಾಗಿ ಸಾವುಂಟು !
ಪಾರ್ಥನಾಗಲಾರೆ;
ನನಗೇಕೆ ? ಎದೆ ಸೀಳುವ ಕಗ್ಗಂಟು !

ಧರ್ಮಜ, ಭೀಮ, ಸಹದೇವ?
ಪಾಂಡವರೈವರೂ ಪಾಪವಗೈದರು
ಫಲವಿಲ್ಲ !

ರಾಮನಾಗಲೋ ? ಇಲ್ಲ ಕೃಷ್ಣನೋ ?
ಬಡವನಿಗೇಕೆ ದೈವದ ಧ್ಯಾನ ?
ದೈವತ್ವಕ್ಕೆ ಸಲ್ಲೆನು !

ದುರ್ಯೋಧನ, ದುಶ್ಯಾಸನ, ರಾವಣನೇ ?!
ದೂರರೇ ಜನ ?
ದುಶ್ಚಟಗಳ ಮುಂದಿಟ್ಟು !

ಮತ್ತೇನಾಗಲಿ ನಾನು; ಜಗದೊಳಗೆ ?
ನಾನು ನಾನಾದರೆ ಸಾಕಪ್ಪ;
ಈ ಘಳಿಗೆ !

- ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author