Poem

ಮನದಿಂಗಿತ

ಹೊಂಗನಸೊಂದು ಬಿದ್ದಂತೆ
ಹಸಿರ ಹಾದಿಯಲಿ
ಹೂಮಳೆಯೇ ಸುರಿದಂತೆ
ಹೃದಯದ ಬೀಡಿನಲಿ

ಕಾಣದ ಊರಿನ ನೆನಪಿನ ಪಯಣ
ಕಾಡುವುದೇಕೆ ಅನುಕ್ಷಣ
ಕಾಣುವ ವಾಸ್ತವ ಭಾವಗಳೆಲ್ಲ
ಮರೆವುದೇಕೋ ಅರೆಕ್ಷಣ

ನೀಲಗಗನದಿ ಮೇಘದೂತ
ವಿಹರಿಸುವ ಏಕಾಂತದಿ
ಮನದ ತುಂಬಾ ಕನಸಿನೋಟ
ಓಡುವುದು ಆವೇಗದಿ

- ಅಜಯ್ ಅಂಗಡಿ

 

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author