Poem

ನಾನು ಎಂಬುದು ನಾನಲ್ಲ

ನಾನು ಎಂಬುದು ನಾನಲ್ಲ
ಆಆಆ..........
ನಾನು ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ.

||ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ||

ನರದೇಹವಿದು ನಾನಲ್ಲ
ಜರ ಮರಣಾದಿಯು ನಾನಲ್ಲ ...
ನರದೇಹವಿದು ನಾನಲ್ಲ
ಜರ ಮರಣಾದಿಯು ನಾನಲ್ಲ ...
ವರ ವೈಭವ ಸಂಸಾರದ ಸವಿ
ಸುಖ ಮರನಾಯಕ ನಾನಲ್ಲ

|| ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ ||

ಮಾತ ಪಿತ ಸುತ ನಾನಲ್ಲ
ಗುರುನಾಥನಾದವ ನಾನಲ್ಲ ...
ಮಾತ ಪಿತ ಸುತ ನಾನಲ್ಲ
ಗುರುನಾಥನಾದವ ನಾನಲ್ಲ ...
ಜಾತಿ ಗೋತ್ರಗಳು ನಾನಲ್ಲ
ಬಹು ಪ್ರೀತಿಯ ಸತಿ ಸುತ ನಾನಲ್ಲ

|| ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ ||

ನಾನಾ ರೂಪವು ನಾನಲ್ಲ ..
ನಾ ಶಿಶುನಾಳಾಧೀಶನ ಬಿಡಲಿಲ್ಲ
ನಾನಾ ರೂಪವು ನಾನಲ್ಲ ..
ನಾ ಶಿಶುನಾಳಾಧೀಶನ ಬಿಡಲಿಲ್ಲ
ನಾ ... ಅಳಿಯದೇ
ನಾ ...ತಿಳಿಯಲಾರದೂ..
ನಾ ... ಅಳಿಯದೇ
ನಾ ...ತಿಳಿಯಲಾರದೂ..
ನೀ ಎಣಿಸುವ ಗುಣ ನಾನಲ್ಲಾ....

|| ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ||

ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನಾನು ಎಂಬುದು ನಾನಲ್ಲ..
ಈ ಮಾನುಷ ಜನ್ಮವು ನಾನಲ್ಲ. . . ||

- ಸಂತ ಶಿಶುನಾಳ ಶರೀಫ

 

 

ವಿಡಿಯೋ
ವಿಡಿಯೋ

ಶರೀಫ ಗಂಗಪ್ಪ ಚಿಗಳ್ಳಿ

ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ 500 ಹೆಚ್ಚು ಲೇಖನೆ, 100 ಕೂ ಹೆಚ್ಚು ಕವನ, ಕಥೆ, ಇತ್ಯಾದಿ ಬರಹ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ತೃತೀಯ ಬಹುಮಾನ, ಕರುನಾಡ ಹಣತೆ ಸಾಹಿತ್ಯ ಸೇವಾ ರತ್ನ ರಾಜ್ಯ ಪ್ರಶಸ್ತಿ,ಅನೇಕ ಜಿಲ್ಲಾ, ತಾಲೂಕು ಮಟ್ಟದ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ ಲಭಿಸಿವೆ. ಸಾಹಿತ್ಯ ಕೃಷಿ:- ವಿಚಾರ ದೀಪ್ತಿ ಪುಸ್ತಕ ( 2021)

More About Author