ಕಸಿದ ಕನಸನು ಮೂಸಿ ಬಿಟ್ಟೆಯಾ? ಬೆಸದ ಪರಿಯನ್ನು ಅಳಿಸಿ ಬಿಟ್ಟೆಯಾ?
ಹೊಸ ಬಗೆಯ ಒಲವು ತಿಳಿಯಲಿಲ್ಲ ನಿನಗೆ
ಕಡಲು ಮೊರತಕೆ, ಒಡಲ ತುಳಿತಕೆ ಹಾರಿ ಬಿಟ್ಟ ಹಲವು ಸಂಕಲ್ಪಗಳೆಲ್ಲ
ನಿಮಿಷ ನಿಮಿಷಕೂ ನನ್ನ ಪ್ರಶ್ನೆಕೇಳಿ ಬಾಯಿ ಬಡಿದುಕೊಳ್ಳುತ್ತಿವೆ.
ಇದುವೆ ಈ ಜನ್ಮದ ಲೋಕ ವಾರ್ತೆ? ಇನ್ನು ಉಳಿದಿರುವುದೇನಿದೆ?
ನನ್ನ ನಿನ್ನ ನಡುವೆ? ನೀ ನಾನೆಂಬುದ ಮರೆತೆ.
ನಾ ಅರಿತೆಯಾದರೆ ನೀ ಮರೆತೆ, ನಾನೆಂಬುದೇ ನಮ್ಮೆಲ್ಲರ ಕೊರೆತೆ.
ಅರಿವಲ್ಲವೆ ಜಗ? ಅರಿವಲ್ಲವೆ ಯುಗ? ಅರಿವಿಲ್ಲದೆ ಅರಿವೆಲ್ಲಿ ಫಲ?
ಡಾ ವಿಜಯಕುಮಾರ ವಿಶ್ವಮಾನವ
ವಿಡಿಯೋ
ವಿಡಿಯೋ
ವಿಜಯಕುಮಾರ ಎಚ್. ವಿಶ್ವಮಾನವ
ವಿಜಯಕುಮಾರ ಎಚ್. ವಿಶ್ವಮಾನವ ಅವರು ಮೂಲತಃ ಕಲಬುರ್ಗಿಯವರು. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಪಕರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಕವನ, ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.