ಭೂ ವಿದ್ವಂಸಕ ತಿದ್ದುಪಡಿಗಳು

Author : ಹೆಚ್. ಎನ್. ನಾಗಮೋಹನದಾಸ್

Pages 32

₹ 27.00




Year of Publication: 2020
Published by: ಅಭಿರುಚಿ ಪ್ರಕಾಶನ,
Address: ನಂ.4, ಕೆ.ಆರ್.ವೃತ್ತ, ಮೈಸೂರು-1

Synopsys

ಡಾ. ಎಚ್.ಎನ್. ನಾಗಮೋಹನದಾಸ್ ಅವರ ಕೃತಿ-ಭೂ ವಿದ್ವಂಸಕ ತಿದ್ದುಪಡಿಗಳು. ಸರ್ವರಿಗೂ ಭೂಮಿ ದೊರೆಯಬೇಕು ಏಂಬ ಉದ್ದೇಶದೊಂದಿಗೆ ಸಂವಿಧಾನದಡಿ ಕೆಲ ನಿಯಮಗಳನ್ನು ರೂಪಿಸಲಾಯಿತು. ಮುಂದೆ ಬಂದ ಸರ್ಕಾರಗಳು ತಮ್ಮ ಸ್ವಾರ್ಥ ಸಾಧನೆಗೆ ನಿಯಮಗಳಿಗೆ ತಿದ್ದುಪಡಿ ತಂದರು. ಇದರ ಪರಿಣಾಮ,  ರೈತರಿಗೆ ವಿನಾಶಕಾರಿಯಾದ ಕೆಲ ನಿಯಮಾವಳಿಗಳನ್ನು ಜಾರಿಗೆ ತರುವ ಸರ್ಕಾರದ ಹುನ್ನಾರಗಳನ್ನು ಇತ್ಯಾದಿ ಇಲ್ಲಿ ಪ್ರಸ್ತಾಪಿಸಿ ಮತ್ತು  ಅವುಗಳ ಹಿಂದಿನ ಉದ್ದೇಶವನ್ನು ಲೇಖಕರು ‘ವಿದ್ವಂಸಕ’ ಎಂದು ಅಭಿಪ್ರಾಯಪಟ್ಟಿದ್ದು, ತಮ್ಮದೇ ನಿಲುವು-ವಿಚಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕೃತಿಯಲ್ಲಿ ಶಿವಸುಂದರಂ, ಎಂ. ಲಕ್ಷ್ಮಣ, ಎಸ್. ಸಿದ್ಧಲಿಂಗಯ್ಯ, ಯೋಗೇಂದ್ರ ಯಾದವ್ ಹಾಗೂ ದೇವನೂರು ಮಹಾದೇವ ಅವರ ಲೇಖನಗಳು ಅಭಿಪ್ರಾಯ ರೂಪದಲ್ಲಿವೆ.  

About the Author

ಹೆಚ್. ಎನ್. ನಾಗಮೋಹನದಾಸ್

ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ.  ...

READ MORE

Related Books