ಮಾನವ ಹಕ್ಕುಗಳು

Author : ರೇವಯ್ಯ ಒಡೆಯರ್

Pages 110

₹ 175.00




Published by: ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ
Address: ಬೆಂಗಳೂರು, ಕರ್ನಾಟಕ

Synopsys

‘ಮಾನವ ಹಕ್ಕುಗಳು’ ರೇವಯ್ಯ ಒಡೆಯರ್ ಅವರ ಅಧ್ಯಯನ ಕೃತಿ ಇದು. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮೂಲತಃ ಪ್ರಾಣಿಯಾದ ಮನುಷ್ಯ `ಮಾನವೀಯತೆ‘ಯನ್ನು ರೂಢಿಸಿಕೊಂಡಿದ್ದರಿಂದ ಪ್ರಾಣಿಗಳಿಗಿಂತ ಭಿನ್ನನಾಗಿ ಮಾನವನೆಂದು ಕರೆಸಿಕೊಂಡ. ಪ್ರತಿಯೊಬ್ಬರ ಆಳದಲ್ಲಿರುವ ಸಹಜ ಕ್ರೌರ್ಯ, ಹಿಂಸಾತ್ಮಕ ಸ್ವಭಾವವನ್ನು ಮೀರುತ್ತಲೇ ವ್ಯಕ್ತಿತ್ವವನ್ನು ಕಟ್ಟಿಕೊಂಡ. ಹಿಂಸೆ ತ್ಯಜಿಸಿ ಸದ್ವ್ಯಕ್ತಿಯಾಗುವುದೇ ಸಮಾಜದ ಪುರೋಗಾಮಿ ಚಿಂತನೆ. ಮನುಷ್ಯನ ಆಳದಲ್ಲಿರುವ ಪ್ರಾಣಿ ಸಹಜ ಹಿಂಸಾ ಮನೋವಿಕಾರ ಕೆಲವೊಮ್ಮೆ ರಕ್ಕಸ ಕುಣಿತ ಮಾಡಿಬಿಡುತ್ತದೆ. ದೇಶಗಳ ಮಧ್ಯದ ಯುದ್ಧದಲ್ಲಿ,ಪೊಲೀಸ್ ದೌರ್ಜನ್ಯದಲ್ಲಿ, ಜಾತಿ ವೈಷಮ್ಯದಲ್ಲಿ, ಕೋಮು ಗಲಭೆಯಲ್ಲಿ ಮನುಷ್ಯ ಮತ್ತೆ ಕಾಡು ಮೃಗಗಳನ್ನೂ ಮೀರಿಸುವ ಹಿಂಸಾಪ್ರವೃತ್ತಿ ಪ್ರದರ್ಶಿಸಿಬಿಡುತ್ತಾನೆ. ಹೀಗೆ ಕೌರ್ಯ ವಿಜೃಂಭಿಸಿದಾಗೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುತ್ತದೆ. ಸಹವರ್ತಿಗಳ ಹಕ್ಕುಗಳನ್ನು ನಿರಾಕರಿಸುತ್ತಲೇ ತಮ್ಮ ಮೇಲಧಿಕಾರವನ್ನು ಮನುಷ್ಯ ಸ್ಥಾಪಿಸುತ್ತಾನೆ. ಇತಿಹಾಸದುದ್ದಕ್ಕೂ ಇಂತಹ ಸಂಗತಿಗಳು ಸಾಕಷ್ಟು ನಡೆದಿವೆ. ಡಾ. ರೇವಯ್ಯ ಒಡೆಯರ್ ರಚಿಸಿದ `ಮಾನವ ಹಕ್ಕುಗಳು – ಮಾನವತೆಯ ಶಾಸನರೂಪ‘ ಎಂಬ ಪುಸ್ತಕ ಮಾನವೀಯ ನೆಲೆಯ ಹುಡುಕಾಟ. ವಿವಿಧ ಆಯಾಮಗಳಿಂದ ಮಾನವ ಹಕ್ಕುಗಳನ್ನು ಶೋಧಿಸುವ ಒಡೆಯರ್, ಅದಕ್ಕೊಂದು ಸೈದ್ಧಾಂತಿಕ ನೆಲೆಗಟ್ಟು ರೂಪಿಸಿಕೊಡುತ್ತಾರೆ. ಶಾಸನಾತ್ಮಕ ವಿವರಗಳಿಗೆ ಸೀಮಿತವಾಗದೇ ವಾಸ್ತವ ವಿವರಗಳನ್ನು ಮುಖಾಮುಖಿಯಾಗಿಸುತ್ತಾ, ಮಾನವ ಹಕ್ಕುಗಳ ಉಲ್ಲಂಘನೆ ಬಗೆಗಳನ್ನು ಕಣ್ಮುಂದೆ ಕಟ್ಟಿಕೊಡುತ್ತಾರೆ.

About the Author

ರೇವಯ್ಯ ಒಡೆಯರ್

ರೇವಯ್ಯ ಒಡೆಯರ್ ಅವರು ಎಂ.ಎ, ಎಂ.ಫಿಲ್, ಪಿಎಚ್.ಡಿ ಪದವೀಧರರು. ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಎಂ.ಫಿಲ್ ಹಾಗೂ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳು’ ಪ್ರೌಢ ಪ್ರಬಂಧ ಸಲ್ಲಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.  ಸಾಹಿತ್ಯದ ಸಿದ್ದಾಂತಗಳನ್ನು ಮಾನವಿಕ ವಿಚಾರಗಳೊಂದಿಗೆ ಅನುಸಂಧಾನಗೊಳಿಸಿ, ತಾತ್ತ್ವಿಕ ಅಭಿಪ್ರಾಯಗಳನ್ನು ಮಂಡಿಸುವಂತಹ ಅನೇಕ ಲೇಖನ ಕಿರುಕೃತಿಗಳನ್ನು ರಚಿಸಿರುತ್ತಾರೆ. ಕುವೆಂಪು ವಿಶ್ವವಿದ್ಯಾಲಯದ ಸಹಕಾರಿ ಅಧ್ಯಯನ ಪೀಠವು ಪ್ರಕಟಿಸಿರುವ ‘ಸದನದಲ್ಲಿ ಕೆ.ಎಚ್. ಪಾಟೀಲ’ ಸಂಪುಟಗಳ ಉಪಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಉಜ್ಜಯಿನಿ ಶ್ರೀ ಕ್ಷೇತ್ರ ದರ್ಶನ, ಪರಿಪೂರ್ಣ. ಸಂಸದೀಯ ಇತಿಹಾಸ, ನಮ್ಮ ವಿಧಾನಮಂಡಲ, ರಾಜ್ಯಪಾಲರು ಒಂದು ವಿಶ್ಲೇಷಣೆ, ಪ್ರಜಾಪ್ರಭುತ್ವ ...

READ MORE

Related Books