ಗಾನಕಲೆ

Author : ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ

Pages 334

₹ 300.00




Year of Publication: 2022
Published by: ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್
Address: ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್, 93/1, ಕೇಶವಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560004, ಉಮಾ ಥಿಯೇಟರ್ ಹತ್ತಿರ, ಚಾಮರಾಜಪೇಟೆ
Phone: 9448284602, 080-26612730, 080-26612731

Synopsys

ಇಪ್ಪತ್ತನೆಯ ಶತಮಾನದ ಶ್ರೇಷ್ಠ ಸಂಗೀತಜ್ಞರಲ್ಲಿ ಗಣ್ಯರಾಗಿದ್ದವರು ರಾಳಪಲ್ಲಿ ಆನಂತಕೃಷ್ಣಶರ್ಮರು. ಶ್ರೇಷ್ಠ ಗಾಯಕರೂ ಆಸ್ಥಾನ ವಿದ್ವಾಂಸರು ಆಗಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಭ್ಯಾಸ ಮಾಡಿದ್ದ ಕರ್ಮದ ಸಂಗೀತ ಶಾಸ್ತ್ರದಲ್ಲೂ ಪ್ರಯೋಗದಲ್ಲಿ ಅಸಾಧಾರಣ ಮೂರ್ತಿಯನ್ನು ಪಡೆದಿದ್ದರು, ಹಲವು ಶಿಷ್ಯರನ್ನೂ ಉನ್ನತಮಟ್ಟದ ಸಂಗೀತಗಾರರನ್ನಾಗಿ ರೂಪಿಸಿದರು. ಸಂಗೀತಶಾಸ್ತ್ರ ವನ್ನೂ ಸಂಗೀತಗಾರರನ್ನೂ ಕುರಿತಂತೆ ಅವರು ಕರ್ನಾಟಕ ಆಂಧ್ರ ಪ್ರದೇಶಗಳಲ್ಲಿ ಹಲವಾರು ಉಪನ್ಯಾಸಗಳನ್ನೂ ಮಾಡಿದ್ದರು. ಕನ್ನಡ ತೆಲುಗುಗಳಲ್ಲಿ ಸುಮಾರು ಲೇಖನಗಳನ್ನೂ ಬರೆದಿದ್ದರು. ಶರ್ಮರ ಆ ಲೇಖನ- ಭಾಷಣಗಳ ಸಂಕಲನ- ಗಾನಕಲೆಯಾಗಿದೆ.

About the Author

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ
(23 January 1893)

ತ್ರಿಭಾಷಾ ಪಂಡಿತ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮ ಅವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ರಾಳ್ಳಪಳ್ಳಿಯಲ್ಲಿ. ಸಂಸ್ಕೃತ, ಕನ್ನಡ, ತೆಲುಗು ಭಾಷಾ ಪಂಡಿತರು. ಸಂಗೀತ ತಜ್ಞರು. ತಂದೆ- ಕೃಷ್ಣಮಾಚಾರ್ಯರು  ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆ ಮತ್ತು ಪರಕಾಲ ಮಠದ ಶ್ರೀಕೃಷ್ಣಬ್ರಹ್ಮತಂತ್ರಿ ಯತೀಂದ್ರರಲ್ಲಿ ವ್ಯಾಕರಣ ಮತ್ತು ಅಲಂಕಾರ ಶಾಸ್ತ್ರ  ವ್ಯಾಸಂಗ ಮಾಡಿದರು.  ಕರಿಗಿರಿರಾಯರು, ಚಿಕ್ಕರಾಮರಾಯರು ಮತ್ತು ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದರು. 1912ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತೆಲುಗು ಅಧ್ಯಾಪಕರಾದರು. 1949ರಲ್ಲಿ ನಿವೃತ್ತಿ ಪಡೆದರು.  ತಿರುಪತಿ ಪ್ರಾಚ್ಯ ಸಂಶೋಧನಾಲಯದಲ್ಲಿ ರೀಡರ್ ಹುದ್ದೆಗೆ ಸೇರಿ, ತಾಳ್ಳಪಾಕ ಕವಿಗಳ ಗೇಯ ರಚನೆಗಳ ಸಂಶೋಧನೆಯ ಮೂಲಕ ತಾಳ್ಳಪಾಕ ಪಾಟಲು ...

READ MORE

Related Books