ಗೆದ್ದೇ ಗೆಲ್ತೀವಿ

Author : ಬೇದ್ರೆ ಮಂಜುನಾಥ

₹ 200.00




Year of Publication: 2021
Published by: ನವಕರ್ನಾಟಕ ಪ್ರಕಾಶನ

Synopsys

ಬೇದ್ರೆ ಮಂಜುನಾಥ್ ಅವರ ಶಿಕ್ಷಣ ಸಂಬಂಧಿತ ಕೃತಿ ಗೆದ್ದೇ ಗೆಲ್ತೀವಿ. ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೋರ್ಸ್ ಗಳ ಮಾಹಿತಿಯ ಜೊತೆಗೆ ಸಾಹಿತ್ಯ ಕೈಪಿಡಿ ಈ ಕೃತಿ. ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಡಿ. ಜೆ. ಮಂಜುನಾಥ ರೆಡ್ಡಿ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದು, 'ಈ ಕೃತಿಯಲ್ಲಿರುವ 8 ಭಾಗಗಳಲ್ಲಿನ 100+ ಆಧ್ಯಾಯಗಳಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಬೇಸಿಕ್ ಸೈನ್ಸ್ ಆರ್ಟ್ಸ್ ಇತ್ಯಾದಿ ವಿಷಯಗಳಲ್ಲಿರುವ ಹೊಸ ಕೋರ್ಸ್‌ಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ಸ್ವಯಂ ಉದ್ಯೋಗ, ಕೌಶಲಗಳು, ವ್ಯಮಾರ್ಗದರ್ಶನ ಕುರಿತ ವಿಪುಲ ಮಾಹಿತಿ ಸಂಗ್ರಹಿತವಾಗಿದೆ. ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಏಟ ಕೊನೆಯ ಭಾಗ ಅತ್ಮವಿಶ್ವಾಸವನ್ನು ಹೆಚ್ಚಿಸುವ ಜಾನಿಕ್‌ ನಂತೆ ಕೆಲಸ ಮಾಡುವುದರಿಂದ ಯುವಜನರು ಭಾಗವನ್ನು ಮೊದಲಿಗೆ ಓಡಿದಲ್ಲಿ ಹೆಚ್ಚು ಲಾಭವಾಗುತ್ತದೆ.' ಎನ್ನುತ್ತಾರೆ.

About the Author

ಬೇದ್ರೆ ಮಂಜುನಾಥ
(10 June 1967)

ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ...

READ MORE

Related Books