ಕನ್ನಡ ಕೈಗನ್ನಡಿ

Author : ಕಲ್ಯಾಣರಾವ ಜಿ. ಪಾಟೀಲ

Pages 392

₹ 290.00




Year of Publication: 2016
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸೂಪರ್ ಬಜಾರ್, ಮುಖ್ಯರಸ್ತೆ, ಕಲಬುರಗಿ-585101

Synopsys

ಲೇಖಕರಾದ ಡಾ. ಕಲ್ಯಾಣರಾವ್ ಪಾಟೀಲ ಹಾಗೂ ಲಕ್ಷ್ಮಿಕಾಂತ ಪಂಚಾಳ ಅವರು ಜಂಟಿಯಾಗಿ ಕನ್ನಡ ಕೈಗನ್ನಡಿ ಕೃತಿ ರಚಿಸಿದ್ದು, ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ನೇಮಕಾತಿಗಾಗಿ ಸಿದ್ಧಪಡಿಸಿದ ಜ್ಞಾನದ ಕಣಜವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಅದರ ಕಾಲಾನುಕ್ರಮದ ಘಟ್ಟಗಳು, ಕಾವ್ಯ ಮಿಮಾಂಸೆ, ಸಾಹಿತ್ಯ ವಿಮರ್ಶೆ, ಕನ್ನಡ ಸಾಹಿತ್ಯದ ರೂಪಗಳಾದ ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ, ಕೀರ್ತನ, ತ್ರಿಪದಿ, ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ಆತ್ಮಕಥೆ, ಪ್ರವಾಸಕಥೆ, ಸಂಶೋಧನೆ ಹೀಗೆ ಸಮಗ್ರ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ಮನದಟ್ಟು ಮಾಡಿಕೊಡುವಲ್ಲಿ ವಸ್ತುನಿಷ್ಠ ಪ್ರಶ್ನೋತ್ತರ ಮಾಲಿಕೆಯು ಉಪಯುಕ್ತವಾಗಿದೆ. ವಚನಕಾರರ ಅಂಕಿತಗಳು, ಕನ್ನಡ ಸಣ್ಣ ಕಥೆಗಳು, ಅಕ್ಷರ ಹೊಸ ಕಾವ್ಯ, ಕನ್ನಡದ ಮೊದಲುಗಳು, ಕೀರ್ತನಕಾರರ ಅಂಕಿತಗಳು, ಚಂಪೂ ಕವಿಗಳು, ಷಟ್ಪದಿ ಕಾವ್ಯಗಳು, ಆಧುನಿಕ ಕವಿ ಕಾವ್ಯಗಳು, ಮಹಾಕಾವ್ಯಗಳು, ಕಥಾ ಸಂಕಲನಗಳು, ನಾಟಕಕಾರರು, ಪ್ರಬಂಧ ಕೃತಿಗಳು, ವಿಮರ್ಶಾ ಕೃತಿಗಳು, ಜೀವನ ಚರಿತ್ರೆಯ ಕೃತಿಗಳು, ಪ್ರವಾಸ ಕಥೆಗಳು, ಅಭಿನಂಧನ ಗ್ರಂಥಗಳು, ಭಾಷಾವಿಜ್ಞಾನದ ವಾದಗಳು, ಛಂದಸ್ಸಿನ ಗ್ರಂಥಗಳು, ಕನ್ನಡ ನಿಘಂಟುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರಕವಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಹೀಗೆ ಹತ್ತು ಹಲವು ವಿಷಯಗಳ ಸಮಗ್ರ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಕೊಡಲಾಗಿದೆ. ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ನೇಮಕಾತಿಗಾಗಿ ನಡೆದ ಇದುವರೆಗಿನ ಪ್ರಶ್ನೆಪತ್ರಿಕೆಗಳ ಉತ್ತರಸಹಿತ ವಿವರಣೆಯನ್ನು ಕೊಟ್ಟಿರುವುದು ವಿಶೇಷ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books