ಕನ್ನಡ ಬರಹದ ಸೊಲ್ಲರಿಮೆ – 5

Author : ಡಿ.ಎನ್. ಶಂಕರ ಬಟ್

Pages 202

₹ 240.00




Year of Publication: 2015
Published by: ಡಿ.ಎನ್.ಶಂಕರ್ ಬಟ್
Address: ಡಾ.ಡಿ.ಎನ್.ಶಂಕರ್ ಬಟ್ ಅಂಚೆ ಪೆಟ್ಟಿಗೆ :- ಬಿ.ಮಂಚಾಲೆ ಸಾಗರ ೫೭೭ ೪೩೧

Synopsys

ಕನ್ನಡದ್ದೇ ವ್ಯಾಕರಣ ರಚಿಸುವಲ್ಲಿ ನಿರತರಾಗಿದ್ದ ಶಂಕರಭಟ್‌ ಅವರ ಕನ್ನಡ ಬರಹದ ಸೊಲ್ಲರಿಮೆ ಪುಸ್ತಕದ ಐದನೇ ಭಾಗ ಇದಾಗಿದೆ. ‘ಪರಿಚೆಪದಗಳು’ ಮತ್ತು ‘ಎಣಿಕೆಪದಗಳು’ ಎಂಬ ಎರಡು ಪಸುಗೆಗಳಿವೆ. ಈ ತುಂಡಿನ ಮೊದಲನೇ ಪಸುಗೆಯಲ್ಲಿ ಅಗಲ, ಉದ್ದ, ಕೆಂಪು, ಉರುಟು, ಮೊದಲಾದ ಹೆಸರು ಪರಿಚೆಗಳನ್ನು ಮತ್ತು ಮೆಲ್ಲಗೆ, ಹಿಂದೆ, ಬಳಿಕ, ತುಸು, ಮೊದಲಾದ ಎಸಕಪರಿಚೆಗಳನ್ನು ಗುಂಪಿಸುವುದು ಹೇಗೆ, ಅವನ್ನು ಬೇರೆ ಬಗೆಯ ಪದಗುಂಪುಗಳಿಂದ ಬೇರ‍್ಪಡಿಸುವುದು ಹೇಗೆ, ಸೊಲ್ಲುಗಳಲ್ಲಿ ಅವನ್ನು ಹಂತಪದಗಳೊಂದಿಗೆ ಮತ್ತು ಹೋಲಿಕೆಯ ನುಡಿತಗಳೊಂದಿಗೆ ಬಳಸುವುದು ಹೇಗೆ ಎಂಬುದನ್ನೂ ಈ ಪಸುಗೆಯಲ್ಲಿ ತಿಳಿಸಲಾಗಿದೆ. ಈ ಅಯ್ದನೇ ತುಂಡಿನ ಎರಡನೇ ಪಸುಗೆಯಲ್ಲಿ ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳನ್ನು ಹೆಸರುಪದ ಮತ್ತು ಪರಿಚೆಪದಗಳಿಂದ ಬೇರ‍್ಪಡಿಸುವುದು ಹೇಗೆ, ಅವನ್ನು ಬಳಸಿರುವ ಪದಗಳಲ್ಲಿ ಕಾಣಿಸುವ ಇಟ್ಟಳಗಳು ಎಂತಹವು, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆಯೆಂತಹುದು ಎಂಬುದನ್ನು ತಿಳಿಸಲಾಗಿದೆ.

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books