ಅಮರಸಿಂಹನ ನಾಮಲಿಂಗಾನುಶಾಸನ ಅಥವಾ ಅಮರಕೋಶ

Author : ಎನ್. ರಂಗನಾಥಶರ್ಮಾ

Pages 492

₹ 170.00




Year of Publication: 2005
Published by: ಕಾವ್ಯಾಲಯ ಪ್ರಕಾಶನ
Address: ಜಯನಗರ, ಮೈಸೂರು-580014

Synopsys

ಅಮರಸಿಂಹನ ನಾಮಲಿಂಗಾನುಶಾಸನವನ್ನು ಅಮರಕೋಶ (ನಿಘಂಟು) ಎಂದೇ ಕರೆಯಲಾಗುತ್ತದೆ. ಈತನ ಕಾಲವನ್ನು 6ನೇ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅಮರಸಿಂಹನು ಮಹಾಯಾನ ಬೌದ್ಧಮತಕ್ಕೆ ಸೇರಿದವನೆಂದು ಹೇಳಲಾಗುತ್ತದೆ. ಅಮರಕೋಶದ ಆದಿಯಲ್ಲಿರುವ ‘ಯಸ್ಯ ಜ್ಞಾನ ದಯಾಸಿಂಧೋ...’ ಎಂಬ ಮಂಗಳಶ್ಲೋಕಕ್ಕೆ ಕ್ಷೀರಸ್ವಾಮಿಯು ಬುದ್ಧನ ಪರವಾಗಿ ಅರ್ಥ ಬರೆದಿದ್ದಾನೆ ಎಂಬುದು ಸಾಕ್ಷಿ. ಆದರೆ, ಈ ಅಭಿಪ್ರಾಯಕ್ಕೆ ಬಹು ವಿದ್ವಾಂಸರ ವಿರೋಧವೂ ಇದೆ. ಭಾಷೆಯ ಮೇಲೆ ಪ್ರಭುತ್ವ ಬರಬೇಕಾದರೆ ವ್ಯಾಕರಣ ಶಾಸ್ತ್ರದ ಮತ್ತು ಅಮರಕೋಶಗಳ ಅಧ್ಯಯನ ಅಗತ್ಯ.ಸಂಸ್ಕೃತ ಭಾಷಿಕರಿಗೂ, ಕನ್ಕಡ ವೈಯ್ಯಾಕರಣಿಗಳಿಗೂ ಈ ಗ್ರಂಥ ಮಹತ್ವದ್ದು ಎಂದು ಅಭಿಪ್ರಾಯಪಡಲಾಗುತ್ತದೆ. 

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books