ಮಧುಮೇಹ: ಭಾರತದ ಅಗೋಚರ ಶತ್ರು

Author : ವಿ. ಲಕ್ಷ್ಮೀನಾರಾಯಣ್

Pages 302

₹ 220.00




Year of Publication: 2015
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಡಾ.ವಿ. ಲಕ್ಷ್ಮಿನಾರಾಯಣ್ ಹಾಗೂ ಡಾ.ಸೂರಜ್ ತೇಜಸ್ವಿ ಅವರು ಜಂಟಿಯಾಗಿ ಬರೆದ ಕೃತಿ-ಮಧುಮೇಹ: ಭಾರತದ ಅಗೋಚರ ಶತ್ರು. ಮಧುಮೇಹದಿಂದ ಆಗುವ ಹತ್ತು ತೊಡಕುಗಳು ಹಾಗೂ ಅವುಗಳ ನಿವಾರಣೆ ಉಪಾಯಗಳ ವಿಸ್ತೃತ ವಿವರಣೆಯ ಕೃತಿ ಇದು. ಇಂದು ಭಾರತದಲ್ಲಿ ಮಧುಮೇಹ ರೋಗಿಗಳು ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಆಧುನಿಕ ಜೀವನ ಶೈಲಿಯು ಇದಕ್ಕೆ ಕಾರಣ. ಉಂಡ ಊಟವನ್ನೂ ಸಹ ಕರಗಿಸಲಾರದಷ್ಟು ಕಸರತ್ತು ಇಲ್ಲದ ಇಂದಿನ ಬದುಕು ಮಧುಮೇಹ ರೋಗಕ್ಕೆ ಆಹ್ವಾನ ನೀಡುತ್ತದೆ. ಮೈ ಮುರಿದು ದುಡಿಯುವ ಮನಸ್ಸು ಇಲ್ಲವಾಗಿದೆ. ಬೊಜ್ಜು ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆಯೂ ಹೆಚ್ಚುತ್ತಿದೆ. ನಾರಿನ ಅಂಶ ಇರುವ ತಿನಿಸುಗಳನ್ನು ಇಚ್ಛೆಪಡುತ್ತಿಲ್ಲ. ಅಲ್ಲದೇ, ಮಾನಸಿಕ ಒತ್ತಡದ ತೀವ್ರತೆಯೂ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಧುಮೇಹ ಹೆಚ್ಚುತ್ತಿದೆ. ಇವುಗಳ ನಿವಾರಣೆಗೆ ಅಗತ್ಯವಿರುವ ಕ್ರಮಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

About the Author

ವಿ. ಲಕ್ಷ್ಮೀನಾರಾಯಣ್

ಹೆಸರಾಂತ ಮಧುಮೇಹ ತಜ್ಞರಾಗಿರುವ ಡಾ. ವಿ. ಲಕ್ಷ್ಮಣರಾವ್‌ ಅವರು ಡಯಾಬೀಟಿಸ್‌ ಕುರಿತಂತೆ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೈಸೂರಿನಲ್ಲಿರುವ ಶ್ರೀಹರಿ ಡಯಾಬಿಟಿಷ್‌ ಸಂಸ್ಥೆಯ ಸಂಸ್ಥಾಪಕರು. ...

READ MORE

Related Books