ವಿಶ್ವವಿಖ್ಯಾತ ಮಾನವ ನಿರ್ಮಿತ ಅದ್ಭುತಗಳು

Author : ಪರಂಜ್ಯೋತಿ (ಕೆ.ಪಿ. ಸ್ವಾಮಿ)

Pages 136

₹ 125.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

 ಲೇಖಕ ಪರಂಜ್ಯೋತಿ (ಕೆ.ಪಿ. ಸ್ವಾಮಿ) ಅವರ ಕೃತಿ-ವಿಶ್ವವಿಖ್ಯಾತ ಮಾನವ ನಿರ್ಮಿತ  ಅದ್ಭುತಗಳು. ಮನುಷ್ಯನಲ್ಲಿ ಮಹತ್ವಾಕಾಂಕ್ಷೆ ಬಹಳ. ಅಂತಹ ಮನುಷ್ಯರೇ ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ. ಮಾನವ ನಿರ್ಮಿತ ಗುಡಿ-ಗೋಪುರಗಳು, ಕೋಟೆ-ಕೊತ್ತಳಗಳು, ಭವ್ಯ ಸೌಧಗಳು, ಅಣೆಕಟ್ಟುಗಳು, ಜಲಮಾರ್ಗಗಳು ಇವಕ್ಕೆ ಜೀವಂತ ಉದಾಹರಣೆಗಳೂ. ಪಿರಮಿಡ್‌ಗಳಿಂದ ಹಿಡಿದು ಇಂದಿನ ಗಗನಚುಂಬಿಗಳವರೆಗೆ ಮಾನವನಿರ್ಮಿತ ಅದ್ಭುತ ರಚನೆಗಳೇ ಆಗಿವೆ. ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಂದಿನಷ್ಟು ಮುಂದುವರಿದಿರಲಿಲ್ಲ; ಈಗ ಲಭ್ಯವಿರುವ ಆಧುನಿಕ ಪರಿಕರಗಳೂ ಆಗ ಇರಲಿಲ್ಲ. ಆದರೂ ಅಂದಿನ ಕೆಲವು ರಚನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಅವುಗಳ ನಿರ್ಮಾಣದ ಉದ್ದೇಶ ಇಂದಿನ ಕಾಲಕ್ಕೆ ಅಪ್ರಸ್ತುತವೆನ್ನಿಸಿಬಹುದಾದರೂ, ಅವು ಅಂದಿನ ಮನುಷ್ಯರ ಮಿದುಳಿನ ಶ್ರಮದ ಫಲಗಳಾಗಿವೆ. ಹಿಂದಿನ ಪಿರಮಿಡ್‌ಗಳಿಂದ ಇಂದಿನ ಅನೇಕ ಆಧುನಿಕ ಪ್ರಯೋಜನಗಳವರೆಗೆ, ಪುರಾತನ ಚೀಣಿ ಗೋಡೆಯಿಂದ ಇಂದಿನ ಕ್ರೀಡಾಂಗಣಗಳವರೆಗೆ ಮಾನವ ನಿರ್ಮಿಸಿದ ಅದ್ಭುತ ರಚನೆಗಳ ಬಗೆಗೆ ವಿಸ್ಮಯಕಾರಿ ವಿವರಗಳನ್ನು ನೀಡಿದ್ದು ಈ ಕೃತಿಯ ವೈಶಿಷ್ಟ್ಯ. .

About the Author

ಪರಂಜ್ಯೋತಿ (ಕೆ.ಪಿ. ಸ್ವಾಮಿ)
(10 June 1936 - 04 July 2019)

ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು.  ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...

READ MORE

Related Books