Articles
ಅಹಂಕಾರ, ಅತಿಕಾಮ, ಭ್ರಮೆ ಇವುಗಳನ್ನೆಲ್ಲ ತನ್ನ ಶಕ್ತಿಯೆಂದೇ ಆತ ಭಾವಿಸುತ್ತಾನೆ. ಪಾತ್ರವಾಗಿ ಬದುಕುವುದು, ಬದುಕಿನುದ್ದಕ್ಕೂ ನಟಿಸುವುದು ಆತನಿಗೆ ಇಷ್ಟದ ಕಾಯಕ. ಆತ ಬಹಳ ಓದಿಕೊಂಡವನು, ವಾದಕ್ಕೆ ನಿಂತರೆ ಸೋಲಿಸುವುದು ಸಾಧ್ಯವಿಲ್ಲ! ಅದೆಷ್ಟೋ ಕೃತಿಗಳನ್ನು ರಚಿಸಿದ ನಿರೂಪಕನೂ ಅಶ್ವತ್ಥಾಮನ ಪ್ರಭಾವಕ್ಕೆ ಒಳಗಾಗುತ್ತಾನೆ.
Read More...
ಪೋರ್ಚುಗಲ್ ನ ಲಿಸ್ಬನ್ ನಿಂದ ಆರಂಭವಾಗುವ ಕತೆ ತೇಜೋ ನದಿಯ ದಂಡೆಯ ಮೇಲೆ ನಿಧಾನವಾಗಿ ಹರಿಯುತ್ತದೆ. ಅಲ್ಲಿನ ಜನಪದ ಕತೆ ಸ್ವಾರಸ್ಯಕರವಾಗಿದೆ. ಪೋರ್ಚುಗಲ್ ನ ರಾಜ ಮ್ಯಾನ್ಯುಯಲ್, ಸ್ಪೇನಿನ ರಾಣಿ, ಯಹೂದಿಗಳ ಮೇಲೆ ಆಕ್ರಮಣ; ಹೀಗೆ ರಾಜಕೀಯ, ಧಾರ್ಮಿಕ ಮತ್ತು ಪ್ರಭುತ್ವದ ಮುಖಗಳನ್ನು ನಿರೂಪಕ ಅನಾವರಣ ಮಾಡಿದ್ದಾರೆ.
Read More...
' ಇಲ್ಲಿ ಭಾವ ತೀವ್ರತೆಯೊಂದೆ ಇಲ್ಲ; ಬದುಕು ಕಟ್ಟುವ ಕಲೆ, ಮಾನವೀಯ ಅಂತಃಕರಣ, ಕಾಳಜಿ, ಆರ್ತತೆ, ಆರ್ದ್ರತೆ ಎಲ್ಲವೂ ಇವೆ. ಇನಿಯ ದನಿಯ ಬಯಕೆಯಿದೆ'.
Read More...
ಮೊಹರು, ಶೀರ್ಷಿಕೆ ಕಥೆ ಗೀರು, ನೆರಳಿನಾಚೆ, ಶಿಕ್ಷೆ, ಅಲಮೇಲಮ್ಮ ಮತ್ತು ಇಂಗ್ಲಿಷ್, ಕುದಿ, ರೊಕ್ಕ ದೋಷ ಎಲ್ಲವೂ ಮೇಲುಸ್ತರದ ವೈವಿಧ್ಯಮಯ ಕಥೆಗಳು.
ಈ ಟೆಂಡರ್ ಕಥೆಯಲ್ಲಿ ಕಟು ವಾಸ್ತವ ಸಂಗತಿಯನ್ನು ದೇವರ ಮುಖಾಂತರ ವಿಡಂಬನೆ ಮಾಡಿದ್ದು ದೀಪ್ತಿ ವಿಚಾರದ ವಿಸ್ತಾರವಾದ ಹರಿವಿನ ದ್ಯೋತಕವಾಗಿದೆ. ಹೀಗೆ ಒಂದೇ ಕಥಾಸಂಕಲನದಲ್ಲಿ ಹಲವು ಒಳ್ಳೆಯ ಕಥೆಗಳು ಇವೆ. ಆ ಕಾರಣದಿಂದ ಖಂಡಿತಾ ಕೊಂಡು ಓದಲೇ ಬೇಕಾದ ಪುಸ್ತಕವಿದು.
Read More...
ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪುಶಿನ್ ಸ್ಕಿ 'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ "ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
Read More...