ಬೆಸ್ತರರ ರಾಣಿ ಚಂಪಕ

Author : ಕೆ. ಅರುಣ್‌ ಪ್ರಸಾದ್‌

Pages 96

₹ 100.00




Year of Publication: 2020
Published by: ವಿಮರ್ಶಕ ಬಳಗ
Address: ಪಶ್ಚಿಮ ಘಟ್ಟದ ಶಿವಮೊಗ್ಗ

Synopsys

‘ಬೆಸ್ತರರ ರಾಣಿ ಚಂಪಕ’ ಕೆ. ಅರುಣ್‌ ಪ್ರಸಾದ್‌ ಅವರ ಐತಿಹಾಸಿಕ ಕೃತಿಯಾಗಿದೆ. ಕೆಳದಿಯ ಖ್ಯಾತ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ದುರಂತ ಪ್ರೇಮ ಕಥೆಯಾಗಿರುವ ಈ ಕಾದಂಬರಿಯನ್ನು ಇತಿಹಾಸದಲ್ಲಿ ಪುಟದಲ್ಲಿ ದಾಖಲಾದ ಮಾಹಿತಿಗಳಿಗೆ ಪೂರಕವಾಗಿ ಮತ್ತು ಜನಪದದಲ್ಲಿನ ಚಂಪಕಾಳ ಕಥೆಗೆ ಅನುಗುಣವಾಗಿ ಬರೆಯಲಾಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಇದರಲ್ಲಿ ಒಟ್ಟು ಐವತ್ತೆಂಟು ಅಧ್ಯಾಯಗಳಿವೆ. ರಾಜಾ ವೆಂಕಟಪ್ಪ ನಾಯಕರ ಪ್ರತಿನಿತ್ಯದ ದಿನಚರಿ, ಆನಂದ ಪುರದಿಂದ ಕವಲೇ ದುರ್ಗಕ್ಕೆ ಹೋಗುವ ಮಾರ್ಗದ ಪ್ರಾಕೃತಿಕ ಸೊಬಗು, ಗುತ್ಯಮ್ಮನ ದೇವಾಲಯ, ಗಂಗಾ ಮಠ…ಇವೆಲ್ಲವುಗಳ ವರ್ಣನೆಯೊಂದಿಗೆ ಪ್ರಾರಂಭವಾಗುವ ಈ ಕಾದಂಬರಿಯಲ್ಲಿ ಪೋರ್ಚುಗೀಸರು, ಕಾಳುಮೆಣಸಿನ ವ್ಯಾಪಾರ, ವಹಿವಾಟುಗಳ ಮಾಹಿತಿಯೂ ಇದೆ..

About the Author

ಕೆ. ಅರುಣ್‌ ಪ್ರಸಾದ್‌

ಕೆ.ಅರುಣ್‌ ಪ್ರಸಾದ್‌ ಮೂಲತಃ ಶಿವಮೊಗ್ಗ ಜಿಲ್ಲೆ ಆನಂದಪುರಂನ ಯಡೆಹಳ್ಳಿಯವರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸಕ್ರಿಯ ರಾಜಕಾರಣದಲ್ಲಿದ್ದು ಹೆಸರು ಮಾಡಿದವರು. ಅತ್ಯುತ್ತಮ ಓದುಗರಾಗಿ, ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳ ಅಂಕಣಗಳಲ್ಲಿ ಬರಹಗಾರರಾಗಿ ಜನಪ್ರೀತಿಗಳಿಸಿರುವ ಕೆ.ಅರುಣ್‌ ಪ್ರಸಾದ್ ಅಪರೂಪದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಈ ಕಾದಂಬರಿ ಬರೆದಿದ್ದಾರೆ. ಕೃತಿಗಳು: ಬೆಸ್ತರರ ರಾಣಿ ಚಂಪಕ ...

READ MORE

Related Books