ಕನ್ನಡ ಸಾಹಿತ್ಯ ಚರಿತ್ರೆ

Author : ತ.ಸು. ಶಾಮರಾಯ

Pages 294




Year of Publication: 2010
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

ಲೇಖಕ ತ.ಸು. ಶಾಮರಾಯ ಅವರ ಇತಿಹಾಸ ಸಂಬಂಧಿ ಕೃತಿ ʻಕನ್ನಡ ಸಾಹಿತ್ಯ ಚರಿತ್ರೆʼ. ಪುಸ್ತಕವು ಕನ್ನಡ ಸಾಹಿತ್ಯದ ಉಗಮ, ಬೆಳವಣಿಗೆಯ ಬಗ್ಗೆ ಹೇಳುತ್ತದೆ. ತಾಳಗುಂದದ ಸಿಂಹಕಟಾಂಜನ ಶಾಸನ, ಬಾದಾಮಿ ಶಾಸನಗಳು ಸೇರಿದಂತೆ ಹಲವಾರು ಶಾಸನಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಪುರಾವೆಗಳಿವೆ. ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಪ್ರಸಿದ್ದತೆಯನ್ನು ಪಡೆದ ಪಂಪ ಕವಿಯ ವಿಕ್ರಮಾರ್ಜುನ ವಿಜಯ ಇವತ್ತಿಗೂ ಮುಖ್ಯ ಕೃತಿಯಾಗಿ ನಿಂತಿದೆ. ನಂತರ ಬಂದ ನಡುಗನ್ನಡದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯಗಳು ಬೆಳಕಿಗೆ ಬಂದವು. ಕುಮಾರವ್ಯಾಸ ಈ ಸಮಯದಲ್ಲಿ ಪ್ರಭಾವವನ್ನು ಪಡೆದ ಕವಿ. ಇವರ ಜೀವನ ಕೃತಿ ʻಕರ್ನಾಟ ಭಾರತ ಕಥಾಮಂಜರಿʼ ಇಂದಿಗೂ ಮೇರು ಕೃತಿಯಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಶಿವರಾಮ ಕಾರಂತ, ಟಿ.ಪಿ. ಕೈಲಾಸಂ ಸೇರಿದಂತೆ ಹಲವಾರು ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಹೊಸ- ಹೊಸ ಪ್ರಕಾರಗಳನ್ನು ತರುವ ಮೂಲಕ ನೂತನ ಹುಟ್ಟು ಹಾಕಿದ್ದಾರೆ. ಹೀಗೆ ಕನ್ನಡ ಸಾಹಿತ್ಯಕ್ಕೆ ಸಂಬಂಧ ಪಟ್ಟ ಹಲವಾರು ಮಾಹಿತಿಗಳನ್ನು ಶಾಮರಾಯ ಅವರು ಕೃತಿಯಲ್ಲಿ ಹೇಳಿದ್ದಾರೆ.

About the Author

ತ.ಸು. ಶಾಮರಾಯ
(12 June 1906 - 21 August 1998)

ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...

READ MORE

Related Books