ಗ್ರಂಥಲಕ್ಷ್ಮೀ

Author : ಎಸ್. ಟಿ. ರಾಮಚಂದ್ರ

Pages 296

₹ 250.00




Year of Publication: 2021
Published by: ಮಾನಸ ಪ್ರಕಾಶನ
Address: No. 67, ಈಸ್ಟ್ ಪಾರ್ಕ್ ರೋಡ್, 14ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- 560 003
Phone: 806573029

Synopsys

ಒಬ್ಬ ವ್ಯಕ್ತಿಯಾಗಿ, ಒಬ್ಬ ಅಧಿಕಾರಿಯಾಗಿ ಲಕ್ಷ್ಮೀನಾರಾಯಣ ಅವರನ್ನು ಇಲ್ಲಿ ಕಂಡು, ಕಂಡರಿಸಲಾಗಿದೆ. ಮುಖ್ಯವಾದ ಮಾತೆಂದರೆ, ಅವರ ಸ್ವ-ದರ್ಶನವೂ ಇಲ್ಲಿದೆ. ಒಂದು ಕಡೆ ಅವರ ವ್ಯಕ್ತಿತ್ವ, ಇನ್ನೊಂದು ಕಡೆ ಕರ್ತೃತ್ವ ಇಲ್ಲಿನ ಲೇಖನಗಳಲ್ಲಿ ಚಿತ್ರಿತವಾಗಿವೆ. ಒಟ್ಟಿನಲ್ಲಿ ಅವರ ಉಜ್ವಲ ಸಾಧನೆಗೆ ವಿಸ್ಮಯಪೂರ್ವಕವಾಗಿ ತಲೆಬಾಗುವಂತಾಗುತ್ತದೆ. ಗ್ರಂಥಾಲಯ ಸಂಬಂಧವಾದ ತಮ್ಮ ಕಾವ್ಯಕಲಾಪವನ್ನು ತಿಳಿಸುವಲ್ಲಿ ಲಕ್ಷ್ಮೀನಾರಾಯಣ ತಮ್ಮನ್ನು ತಾವು ಕಂಡು, ಎಷ್ಟೋ ಸಂಗತಿಗಳನ್ನು ಆತ್ಮಪ್ರತ್ಯಯ ಪೂರ್ವಕವಾಗಿ, ವಸ್ತುನಿಷ್ಠವಾಗಿ ಹೇಳಿಕೊಂಡಿದ್ದಾರೆ. ಅಲ್ಲಿ ಆತ್ಮಶ್ಲಾಘನೆಯೇನಿಲ್ಲ. ಎಂ. ಮಾದಯ್ಯನವರು, ಪ್ರೊ. ಸಿ. ಡಿ. ನರಸಿಂಹಯ್ಯನವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರು ಸಲ್ಲಿಸಿದ ಪ್ರಶಂಸೆಯನ್ನು ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ 85 ವರ್ಷಗಳ ತುಂಬುಬಾಳು, ಕಾಯಕಭೂಯಿಷ್ಠವಾದ ಸಾರ್ಥಕ ಜೀವಿತ ಲಕ್ಷ್ಮೀನಾರಾಯಣ ಅವರದು, ನಿಸ್ಸಂದೇಹವಾಗಿ, ಈ ಕಾಯಕ ಪವೃತ್ತಿ ನಿವೃತ್ತಿಪೂರ್ವದ್ದೂ ಹೌದು.

About the Author

ಎಸ್. ಟಿ. ರಾಮಚಂದ್ರ
(25 June 1959)

ಎಸ್ ಟಿ. ರಾಮಚಂದ್ರ ಮೂಲತಃ ಮಂಡ್ಯ ಜಿಲ್ಲೆಯ ಸಿದ್ದಯ್ಯನಕೊಪ್ಪಲಿನವರು. ಬ್ಯಾಂಕಿಂಗ್ ಆಡಳಿತ ಶಿಕ್ಷಣ ಹಾಗೂ ಅಧ್ಯಯನದಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಮುಂಬೈ, ದೆಹಲಿ, ತಿರುವನಂತಪುರಂ, ಮೈಸೂರು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಸೇವೆಸಲ್ಲಿಸಿದ್ದಾರೆ. ಕ್ಷೇತ್ರೀಯ ಕಛೇರಿ, ವೃತ್ತ ಕಛೇರಿ ಹಾಗೂ ಮುಖ್ಯ ಕಛೇರಿಗಳನ್ನೊಳಗೊಂಡಂತೆ ಹಲವು ಶಾಖೆಗಳಲ್ಲಿ ಸೇವೆ ಸಲ್ಲಿಕೆ, ಶಾಖಾ ವ್ಯವಹಾರ, ತಂತ್ರಜ್ಞಾನ ಅಳವಡಿಕೆ, ಪರಿಶೀಲನೆ, ವಸೂಲಾತಿ, ಸಾಲ, ಮಾರ್ಕೆಟಿಂಗ್, ಸಾಂಸ್ಥಿಕ ಸಂವಹನೆ ಮತ್ತು ಗ್ರಾಹಕ ಸಂಪರ್ಕ ಅಭಿವೃದ್ಧಿ, ಸಾಮಾನ್ಯ ಆಡಳಿತ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ, ನೌಕರ ಸಂಬಂಧಿತ ವಿಷಯಗಳು, ಆಸ್ತಿ ಸಂರಕ್ಷಣೆ, ಆಡಳಿತಾತ್ಮಕ ...

READ MORE

Related Books