ಧರೆಯ ತೋರಣ

Author : ವಿಜಯಕುಮಾರ ಜಿ. ಪರುತೆ

Pages 70




Year of Publication: 2009
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಕಲಬುರಗಿ ತಾಲೂಕು ಘಟಕ, ಜಿಲ್ಲೆ ಕಲಬುರಗಿ

Synopsys

ಲೇಖಕ ಡಾ.ವಿಜಯಕುಮಾರ ಜಿ ಪರುತೆ ಹಾಗೂ ಶೋಭಾ ರಂಜೋಳಕರ್ ಅವರು ಸಂಪಾದಿಸಿದ "ಧರೆಯ ತೋರಣ"ಸ್ಮರಣ ಸಂಚಿಕೆಯು ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬಿಡುಗಡೆಗೊಂಡಿದೆ. ಲೇಖಕಿ ಸರಸ್ವತಿ ಚಿಮ್ಮಲಗಿ ಸಮ್ಮೇಳನ ಸರ್ವಾಧ್ಯಕ್ಷ ರಾಗಿದ್ದರು. ಅಂದಿನ ಕ.ಸಾ.ಪ ಅಧ್ಯಕ್ಷ ಡಾ.ನಲ್ಲೂರ ಪ್ರಸಾದ್ ಆರ್.ಕೆ ನೀಡಿದ ಸಂದೇಶವೂ ಒಳಗೊಂಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಪರಿಷತ್ತು ನಡೆಸುವ"ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು"ಮಹಿಳಾ ಸಂವೇದನೆ ಮತ್ತು ಸಾಹಿತ್ಯವನ್ನು ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತಿದೆ.ಭಾರತೀಯ ಇತಿಹಾಸ ದಲ್ಲಿ ಮಹಿಳೆಗೆ ಸ್ವತಂತ್ರವಾಗಿ ಉಸಿರಾಡಲು ಕಲಿಸಿದ್ದು ಮತ್ತು ಆಕೆಗೆ ಸಮಾನ ಸ್ಥಾನಮಾನ ಕೊಟ್ಟಿದ್ದು ಅವಳ ನೋವಿನ ಧ್ವನಿಯಾದರು ಬಸವಾದಿ ಶರಣರು.ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಕಾಲಿರಿಸಿದ್ದಾಳೆ. ಹೀಗಿದ್ದೂಸಮಾಜದಲ್ಲಿ ಆಗಾಗ್ಗೆ ಆಕೆಯ ಶೋಷಣೆ ಕೇಳಿ ಬರುತ್ತಿದೆ.ಇದು ನಿಲ್ಲಬೇಕಾದರೆ ಮಹಿಳಾ ಸಬಲೀಕರಣ ಆಗಬೇಕು. ಈ ಸ್ಮರಣ ಸಂಚಿಕೆಯಲ್ಲಿ ಮಹಿಳೆಯರ ಸಮಸ್ಯೆ, ಸಮಾಧಾನ, ಸಬಲೀಕರಣ,ಶಿಕ್ಷಣ, ಸವಾಲು ಗಳು ಕುರಿತು ಲೇಖನಗಳು ಒಳಗೊಂಡಿವೆ’ ಎಂದು ಸಂಪಾದಕರು ಹೇಳಿದ್ದಾರೆ.

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books