ಕಲ್ಲೂರು ರುದ್ರಮುನಿದೇವ ಮತ್ತು ಇತರರ ತತ್ವಪದಗಳು

Author : ಎಸ್. ನಟರಾಜ ಬೂದಾಳು

Pages 244

₹ 50.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ತುರುವೇಕೆರೆ ಕಲ್ಲೂರಿಗೆ ಬಂದು ನೆಲೆಸಿ, ಅಲ್ಲಿಯೇ ಸಮಾಧಿ ಹೊಂದಿದ ರುದ್ರಮುನಿ ಸ್ವಾಮಿಗಳು, ಸ್ತ್ರೋತ್ರ, ಅಂಬಾ ಸ್ತುತಿಗಳನ್ನು ಸಾಧಕರು ಹಾಡಿ ಜನಪ್ರಿಯಗೊಳಿಸಿದ್ದಾರೆ. ಅವಧೂತ ಸಂಪ್ರದಾಯದ ರುದ್ರಮುನಿಸ್ವಾಮಿಗಳು ನೇಕಾರ ಕುಲದವರು. ತಮ್ಮ ಕುಲದೇವತೆ ಬನಶಂಕರಿಯ ಉಪಾಸಕರಾದ ಅವರು ಬಾದಾಮಿಯ ಬನಶಂಕರಿ, ಮಾಗಡಿ ರಂಗ, ತರೀಕೆರೆಯ ಹನುಮ ಮುಂತಾದ ದೇವರುಗಳ ಮಂಗಳಾರತಿ ಪದಗಳನ್ನು ರಚಿಸಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚುಂಗನಹಳ್ಳಿಯವರಾದ ಶಿವಪ್ಪ ಅವಧೂತ ಸಂಪ್ರದಾಯದ ಪದಕಾರ. ಸಿದ್ಧರಾಮ, ಶಿವಸಿದ್ಧರಾಮ, ಸಿದ್ಧಲಿಂಗೇಶ, ಚುಂಗನಪುರದ ಮಲ್ಲಿಕಾರ್ಜುನ, ವಡೇರಹಳ್ಳಿ ಗುರುಶಾಂತ ಮುಂತಾದ ಶರಣರನ್ನು ಮತ್ತು ದೈವವಿಶೇಷವನ್ನು ತಮ್ಮ ತತ್ವಪದಗಳ ಅಂಕಿತವಾಗಿಟ್ಟುಕೊಂಡಿದ್ದಾರೆ. ಶಿವಪ್ಪನವರ ಗದ್ದುಗೆಯು ಶೆಟ್ಟಿಕೆರೆಯಲ್ಲಿದೆ.

ಈ ಇಬ್ಬರು ತತ್ವಪದಕಾರರ ಹಾಡುಗಳನ್ನು ಈ ಸಂಪುಟದಲ್ಲಿ ಸಂಕಲಿಸಲಾಗಿದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books