ಶಿವಾನಂದ ಸುಬ್ರಹ್ಮಣ್ಯ ಮತ್ತು ಇತರರ ತತ್ವಪದಗಳು

Author : ಎಸ್. ನಟರಾಜ ಬೂದಾಳು

Pages 292

₹ 55.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಪಾವಗಡ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ಸಂಗ್ರಹಿಸಲಾದ ತತ್ವಪದಗಳು ಈ ಸಂಪುಟದಲ್ಲಿವೆ.

ಮೈಸೂರಿನವನಾದ ಶಿವಾನಂದ ಸುಬ್ರಹ್ಮಣ್ಯ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವಿಸಿದ್ದ. ಶಿವಾನಂದ ಅವರು ’ವೇದಾಂತ ದೀಪಿಕೆ’ ಎಂಬ ಇನ್ನೊಂದು ಗ್ರಂಥವನ್ನೂ ರಚಿಸಿದ್ದ. ಶಾಂಕರ  ಅದ್ವೈತಿಯಾದ ಶಿವಾನಂದ ಶಂಕರಾನಂದ ಶಿವಯೋಗಿಯಂತೆ ಅದ್ವೈತ ಪ್ರಸ್ಥಾನದವನು.

ಬಾಗೇಶಪುರದ ಶಿವಪ್ಪ ಅವರು ಜಮಖಂಡಿಯಿಂದ ಬಂದು ನೆಲೆಸಿದವರು. ಹುಚ್ಚೇಶ್ವರ ನಾಟಕಮಂಡಳಿಯಲ್ಲಿ ಸಂಗೀತ ಹೇಳಿಕೊಡುತ್ತಿದ್ದ ಶಿವಪ್ಪನವರ ಹಸ್ತಪ್ತತಿಯಲ್ಲಿ ಸಂಗೀತ ಮತ್ತು ಭಾಷಾಶುದ್ಧತೆಗಳೆರಡೂ ಮೇಳೈಸಿದಂತಿವೆ.

ಹರಿಹರಗುರು ಎಂಬ ಅಂಕಿತ ನಾಮದಲ್ಲಿ ಬರೆಯುತ್ತಿದ್ದವರು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಅಂಚಿನ ಧರ್ಮಪುರದಲ್ಲಿದ್ದ ಹನುಮಂತರಾಯ. ಅವರಿಗೆ ಗರುಡಚೇಡು ಹನುಮಂತರಾಯ ಎಂಬ ಮತ್ತೊಂದು ಹೆಸರಿತ್ತು. ಅವರು ನಾಟಕದ ಭಾಗವತರಾಗಿದ್ದರು.

ಮಲ್ಲಿಕಾರ್ಜುನ ಶಿವಾನಂದರ ತತ್ವಪದಗಳು ಪಾವಗಡ ತಾಲ್ಲೂಕಿನ ಅಚಲ ಪರಂಪರೆಗೆ ಸೇರಿದವು. ಕೋಲಾರ, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಯ ಗಡಿಭಾಗಗಳಲ್ಲಿ ಚಾಲ್ತಿಯಲ್ಲಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆಂಚಾವಧೂತರು ನಾಡಿನ ಅವಧೂತ ಪರಂಪರೆಯಲ್ಲಿ ದೊಡ್ಡ ಹೆಸರು. ಅವರಿಂದ ಅಥವಾ ಅವರ ಶಿಷ್ಯರಿಂದ ರಚಿತವಾದ ಒಂದೆರಡು ತತ್ವಪದಗಳು ಈ ಸಂಕಲನದಲ್ಲಿವೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books