ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು

Author : ರಂಗನಾಥ ಕಂಟನಕುಂಟೆ

Pages 208

₹ 45.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು-ಲೇಖಕ ರಂಗನಾಥ ಕಂಟನಕುಂಟೆ ಅವರ ಸಂಪಾದಿತ ಕೃತಿ. ಸರ್ಪಭೂಷಣ ಶಿವಯೋಗಿಗಳು ತಮ್ಮ ತತ್ವಪದಗಳ ಸಂಕಲನವನ್ನು ‘ಕೈವಲ್ಯ ಕಲ್ಪವಲ್ಲರಿ’ ಎಂದು ಹೆಸರಿಸಿದರು. ನಿಜಗುಣ ಶಿವಯೋಗಿಗಳ ‘ಕೈವಲ್ಯ ಪದ್ಧತಿ’ ಎಂಬ ಪಾರಮಾರ್ಥಿಕ ಕೃತಿಯ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ.  ವಿವಿಧ ರಾಗಗಳನ ಈ  ಹಾಡುಗಳು, ಕೈವಲ್ಯಪದ್ಧತಿಯಂತೆಯೇ, ಶಿವಕಾರುಣ್ಯಸ್ಥಲ, ಜೀವಸಂಬೋಧನಸ್ಥಲ, ನೀತಿಕ್ರಿಯಾಚರ್ಯ ಪ್ರತಿಪಾದನಸ್ಥಲ, ಯೋಗಪ್ರತಿಪಾದನಸ್ಥಲ ಮತ್ತು ಜ್ಞಾನಪ್ರತಿಪಾದನಸ್ಥಲ ಎಂಬ ಐದು ಸ್ಥಲಗಳಲ್ಲಿ ವಿಂಗಡಣೆಯಾಗಿವೆ.  ಸರ್ಪಭೂಷಣರು ‘ಜ್ಞಾನಶತಕ’ ಎಂಬ ಸಂಸ್ಕೃತ ಕೃತಿಯನ್ನೂ ಬರೆದಿದ್ದಾರೆ.  

ಸರ್ಪಭೂಷಣರು ಬದುಕಿದ ಕಾಲಮಾನವು ವಸಾಹತು ಶಾಹೀ ಸಂದರ್ಭ. ಇಂತಹ ಸಂಧಿಕಾಲದಲ್ಲಿ, ಕರ್ನಾಟಕದಲ್ಲಿ ಅನೇಕ ಅನುಭಾವಿ ತತ್ವಪದಕಾರರು ಹುಟ್ಟಿಕೊಂಡು ತಮ್ಮ ಪಾರಮಾರ್ಥಿಕ ವಿಚಾರಗಳಿಂದ ಜನದ ಮನಸ್ಸನ್ನು ಒಂದು ಹದಕ್ಕೆ ನಿಲ್ಲಿಸಲು ಪ್ರಯತ್ನಪಟ್ಟರೆಂಬುದು ಸಾಂಸ್ಕೃತಿಕವಾಗಿ ಮಹತ್ವದ ಸಂಗತಿಯಾಗಿದೆ.  ಬಾಲಲೀಲಾ ಮಹಾಂತ ಸ್ವಾಮಿಗಳು, ಕಡಕೋಳು ಮಡಿವಾಳೇಶ್ವರರು ; ಹುಬ್ಬಳ್ಳಿಯ ಸಿದ್ಧಾರೂಢರು,  ಶಿಶುನಾಳ ಷರೀಫರು ಮತ್ತು ಇನ್ನೂ ಇಂಥವರು ಕನ್ನಡ ಸಾಹಿತ್ಯದ ನವೋದಯ ಪೂರ್ವದ ಒಂದು ಆನುಭಾವಿಕ ಪರಂಪರೆಯನ್ನೆ ಕಟ್ಟಿದರು. ಅವರು ಭಕ್ತಿ ಮತ್ತು ವಿರಕ್ತಿಗಳನ್ನು ಪ್ರತಿಪಾದಿಸಿದರು ಇಂತಹವರ ಸಾಲಿನಲ್ಲಿ ಸರ್ಪಭೂಷಣ ಶಿವಯೋಗಿಗಳು ಒಬ್ಬರು.   

About the Author

ರಂಗನಾಥ ಕಂಟನಕುಂಟೆ

ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...

READ MORE

Related Books