ಕೇಶವ ನಾಮ ಚೈತನ್ಯ ಧಾಮ

Author : ಎ.ಎನ್.ರಮೇಶ್. ಗುಬ್ಬಿ

Pages 116

₹ 100.00




Year of Publication: 2014
Published by: ವೈದ್ಯವಾರ್ತಾ ಪ್ರಕಾಶನ
Address: ವಿದ್ಯಾರಣ್ಯಪುರಂ, ಮೈಸೂರು- 570008

Synopsys

‘ಕೇಶವ ನಾಮ ಚೈತನ್ಯ ಧಾಮ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಚುಟುಕುಗಳ ಸಂಕಲನ. ಈ ಕೃತಿಗೆ ಡಾ.ರಮಾನಂದ ಬನಾರಿ, ಡಾ.ಎಂ.ಜಿ.ಆರ್. ಅರಸ್ ಅವರ ಬೆನ್ನುಡಿ ಬರಹಗಳಿವೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ರಮೇಶ್ ಗುಬ್ಬಿ ಅವರು ಚಿಂತನಶೀಲ ಲೇಖಕರೆಂದು ಈಗಾಗಲೇ ಗುರುತಿಸಿಕೊಂಡಿದ್ದಾರೆ. ಎಡನೀರು ಶ್ರೀ.ಶ್ರೀ. ಶ್ರೀ ಪೀಠಾಧಿಪತಿಗಳಾದ ಶ್ರೀಕೇಶವಾನಂದಭಾರತಿ ಶ್ರೀಪಾದಂಗಳವರ ಪಾದ ಪದ್ಮಗಳನ್ನು ತಮ್ಮ ಅಂತರಂಗದಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡಿದ್ದಾರೆ. ಇಲ್ಲಿಯ ಚುಟುಕುಗಳಲ್ಲಿ ಭಕ್ತಿಭಾವದ ಬೆಸುಗೆಯ ಅನೂಹ್ಯ ಶಕ್ತಿ ಇರುವುದನ್ನು ಗಮನಿಸ ಬಹುದಾಗಿದೆ. ಚುಟುಕುಗಳಲ್ಲಿ ಅಸಂಖ್ಯ ಸೆಳೆತಗಳಿವೆ. ಸವಾಲುಗಳಿಗೆ, ಬೆರಗುಗೊಳಿಸುತ್ತದೆ.

ಉಪಮೇಯಗಳು ಕಲ್ಪನೆಗಳಿವೆ. ಜೀವ ತುಂಬಿ, ಆಹ್ಲಾದದ ಅನುಭವದ ಕಂಪನ್ನುಂಟು ಮಾಡುತ್ತದೆ. ಅಭಿಮಾನದ ಜೊತೆಗೆ ಹೆಮ್ಮೆ ಎನಿಸುತ್ತದೆ. ಅರ್ಥ ಪೂರ್ಣವಾಗಿದೆ ಎಂದಿದ್ದಾರೆ ಡಾ.ಎಂ.ಜಿ.ಆರ್. ಅರಸ್. ಜೊತೆಗೆ ಇಲ್ಲಿನ ಚುಟುಕುಗಳು ರೋಮಾಂಚನವನ್ನುಂಟು ಮಾಡುತ್ತವೆ. ರೋಚಕವು, ಭಕ್ತಿ ಪ್ರಧಾನವು, ಶರಣಾಗತಿಯ ನಡೆಯು, ಅರ್ಪಣೆಯ ವಿಧಾನವು, ಮನಮಿಡಿತಗಳು, ವೈಯಕ್ತಿಕ ತಲ್ಲಣಗಳು ಸ್ಪಷ್ಟವಾಗಿವೆ’ ಎಂದಿದ್ದಾರೆ.

About the Author

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...

READ MORE

Related Books