ನನ್ನಾಕೆ ಹೇಳಿದ್ದು

Author : ಸಮುದ್ರವಳ್ಳಿ ವಾಸು

Pages 78

₹ 80.00




Year of Publication: 2021
Published by: ಯದುನಂದನ ಪ್ರಕಾಶನ
Address: 1, ನೆಲಮಹಡಿ, ಓಬಳಾಪುರ ಅಂಚೆ, ಬಾಗೂರು ಹೋಬಳಿ, ಬಿ.ಹೊನ್ನೇಹಳ್ಳಿ ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು -573111
Phone: 9449311298

Synopsys

ಲೇಖಕ ಸಮುದ್ರವಳ್ಳಿ ವಾಸು ಅವರ ಹನಿಗವನಗಳ ಸಂಕಲನ ನನ್ನಾಕೆ ಹೇಳಿದ್ದು. ಚುಟುಕು ಕವಿ, ಹಾಸ್ಯ ಬರಹಗಾರ ಪತ್ತಂಗಿ ಎಸ್ ಮುರಳಿ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಹನಿಗವನ ರಚಿಸುವಾಗ ಇವರು ಬಲವಂತವಾಗಿ ಪ್ರಾಸಕ್ಕೆ ಜೋತುಬಿದ್ದಿರುವಂತೆ ಕಂಡುಬರತ್ತವಾದರೂ ಅದು ವಿಪರೀತವಿಲ್ಲ ಎಂಬುದು ಸಮಾಧಾನದ ವಿಷಯ. ಇಲ್ಲಿ ಕವಿ ಪ್ರೀತಿ, ಪ್ರೇಮ, ಕುಟುಂಬ, ಹಿರಿಯ ಕವಿಗಳ ಕುರಿತು, ಸಾಮಾಜಿಕ ರಾಜಕೀಯ ಸೇರಿದಂತೆ, ಅನೇಕ ವಿಚಾರಗಳನ್ನು ಆಯ್ದುಕೊಮಡು ರಚಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಮೀಸೆ ಮಣ್ಣಾಗಲಿಲ್ಲ, ಜಡಿದಿತ್ತು, ಗಾಳಕ್ಕೆ ಸಿಕ್ಕಿ, ಬಿಚ್ಚಂಗಿಲ್ಲ, ಗಂಡಸರ ಪಾಡು, ಇದ್ರೆ, ಲೆಕ್ಕ, ಸಾಲುತ್ತಿಲ್ಲ, ಕರೆ ಸೇರಿದಂತೆ ಅನೇಕ ಹನಿಗವನಗಳಿವೆ.

About the Author

ಸಮುದ್ರವಳ್ಳಿ ವಾಸು
(10 July 1982)

ಸಮುದ್ರವಳ್ಳಿ ವಾಸು ಅವರು ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಾಟೆಹೊಳೆ ಬಳಿಯ ಸಮುದ್ರವಳ್ಳಿಯವರು. ತಂದೆ ಕೃಷ್ಣಗೌಡ, ತಾಯಿ ಕಮಲಮ್ಮ. ಪಿಯುಸಿವರೆಗೆ ಓದು. ವಿದ್ಯುತ್ ಇಲಾಖೆಯಲ್ಲಿ ವೃತ್ತಿ ಪ್ರಾರಂಭಿಸಿ, ಸದ್ಯ, ಕೆ.ಹೊಸಕೋಟೆ ವಿದ್ಯಾತ್ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ  (ಮಾರ್ಗದಾಳು) ಕೆಲಸ ಮಾಡುತ್ತಿದ್ದಾರೆ. ಲೇಖನ, ಕಥೆ, ನಾಟಕ, ಕವಿತೆ, ವಿಮರ್ಶೆ, ಚುಟುಕು ಇತ್ಯಾದಿ  ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.  ಕೃತಿಗಳು: ಸಿಹಿ ಮುತ್ತು (ಚುಟುಕು ಸಂಕಲನ), 'ಯಡವಟ್ಟು ವಾಸು (ಹಾಸ್ಯ ಸಂಕಲನ), ಮಕ್ಕಳ ಕಿರು ನಾಟಕಗಳು (ನಾಟಕ), ಹುಚ್ಚುಡ್ಡಿ (ಕಥಾ ಸಂಕಲನ), ಢಣ ಢಣ ...

READ MORE

Related Books