ಧರಣಿ ಚುಟುಕು ಕವಿತೆಗಳು

Author : ಡಾ. ಧರಣೀದೇವಿ ಮಾಲಗತ್ತಿ

Pages 124

₹ 80.00




Year of Publication: 2018
Published by: ವೈಜ್ಯವಾರ್ತಾ ಪ್ರಕಾಶನ
Address: ವಿದ್ಯಾರಣ್ಯಪುರಂ, ಮೈಸೂರು- 570008
Phone: 9448402092

Synopsys

‘ಧರಣಿ ಚುಟುಕು ಕವಿತೆಗಳು’ ಲೇಖಕಿ ಧರಣೀದೇವಿ ಮಾಲಗತ್ತಿ ಅವರ ಚುಟುಕು ಕವಿತೆಗಳ ಸಂಕಲನ. ಈ ಕೃತಿಗೆ ಪ್ರಕಾಶಕರಾದ ಡಾ.ಎಂ.ಜಿ.ಆರ್. ಅರಸ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಚುಟುಕುಗಳ ರಚನೆಯಿಂದ ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡಿ ಮಹಾಕಾವ್ಯಗಳನ್ನು ರಚಿಸಿ ಸುವಿಖ್ಯಾತರಾದವರನ್ನು ವಿಫುಲ ಸಂಖ್ಯೆಯಲ್ಲಿ ಕಾಣಬಹುದು. ಆದರೆ ಮಹಾಕಾವ್ಯವನ್ನು ರಚಿಸಿ ಖ್ಯಾತಿಯ ಶಿಖರವನ್ನೇರಿದ ನಂತರ ಚುಟುಕು ಸಾಹಿತ್ಯ ರಚಿಸಿದ ಪ್ರಪ್ರಥಮ ಮತ್ತು ಏಕೈಕ ಮಹಿಳಾ ಸಾಧಕಿ ಎಂದು ಡಾ. ಧರಣೀದೇವಿ ಮಾಲಗತ್ತಿ ಐ.ಪಿ.ಎಸ್. ಅವರ ಹೆಸರನ್ನು ದಾಖಲಿಸಿದರೆ ಅದು ಅತಿಶಯೋಕ್ತಿಯಾಗಲಾರದು ಎಂದಿದ್ದಾರೆ ಎಂ.ಜಿ.ಆರ್. ಅರಸ್. ಜೊತೆಗೆ ಸರಳತೆ, ಸಭ್ಯತೆ, ಸುಸಂಸ್ಕೃತಿಯ ಸಹೃದಯ ಸಾಹಿತಿ ಡಾ. ಧರಣೀದೇವಿ ಮಾಲಗತ್ತಿ ಅವರು ಚುಟುಕು ಸಾಹಿತ್ಯ ಸಾಮ್ರಾಜ್ಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ದರಿಂದ ಚುಟುಕು ಸಾಹಿತ್ಯಕ್ಕೆ ವಿಶೇಷವಾದ ಮಾನ್ಯತೆ, ಮನ್ನಣೆ, ಮೆಚ್ಚುಗೆ ದ್ವಿಗುಣಗೊಂಡಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿನ ಚುಟುಕುಗಳಲ್ಲಿ ಸರಳ ಭಾಷೆ, ಮತ್ತು ಲಾಲಿತ್ಯದ ಸಾಲುಗಳಿಂದ ಓದುಗರನ್ನು ಸೆಳೆಯುತ್ತವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books