ಪೆಡಂಭೂತಗಳು ಅಳಿದವೇಕೆ?

Author : ಟಿ. ಆರ್. ಅನಂತರಾಮು

Pages 108

₹ 20.00




Year of Publication: 1995
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161913

Synopsys

‘ಪೆಡಂಭೂತಗಳು ಅಳಿದವೇಕೆ?’ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ. ಸ್ಟೀವನ್ ಸ್ಟಿಲ್‍ಬರ್ಗ್‍ನ `ಜುರಾಸಿಕ್ ಪಾರ್ಕ್’ ಸಿನಿಮಾ ನೋಡಿದ್ದರೆ ನೀವೂ ಎಂದು ಮರೆಯಲಾರಿರಿ. ಭಯಂಕರ ಡೈನೋಸಾರ್ಗಳ ಬಗ್ಗೆ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೀರಿ. ಅದರಲ್ಲಿ ಸೃಷ್ಟಿಸಿದ ಟೈರನೋಸಾರಸ್ ರೆಕ್ಸ್ ಎಂಬ ಡೈನೋಸಾರ್ ಎದೆಯನ್ನು ಡವಗುಟ್ಟಿಸುತ್ತದೆ. ಡೈನೋಸಾರ್ ಗಳು ಭೂಮಿಯ ಮೇಲೆ ಆಳಿದ್ದು ನಿಜ. ಅದು ಭೂಚರಿತ್ರೆಯಲ್ಲಿ ಆರೂವರೆ ಕೋಟಿ ವರ್ಷದ ಹಿಂದಿನ ಕಥೆ. ಆಗ ಜಗತ್ತಿನ ಬಹು ಭಾಗವನ್ನು ಡೈನೋಸಾರ್ಗಳೇ ಆಳುತ್ತಿದ್ದವು. ಈಗಲೂ ಅಮೆರಿಕದ ಮಾಂಟಾನ, ಇತ್ತ ಗೋಬಿ ಮರುಭೂಮಿ, ಅಷ್ಟೇ ಏಕೆ ನಮ್ಮ ಭಾರತದ ಗುಜರಾತ್, ಮಧ್ಯಪ್ರದೇಶ ಮತ್ತು ಆಂಧ್ರದ ಗೋದಾವರಿ ಕಣಿವೆಯಲ್ಲಿ ಅವುಗಳ ಪಳೆಯುಳಿಕೆಗಳು ಸಿಕ್ಕುತ್ತಲೇ ಇವೆ. ಆನೆಗಿಂತ ಐದು-ಹತ್ತು ಪಟ್ಟು ಹೆಚ್ಚು ತೂಕದ ಡೈನೋಸಾರ್ಗಳು ಇದ್ದವು. ದೀರ್ಘಕಾಲ ಭೂಮಿಯಲ್ಲಿ ವಿಕಾಸವಾದ ಡೈನೋಸಾರ್ ಗಳು ಹಠಾತ್ತೆಂದು ಏಕೆ ಮರೆಯಾದವು? ತಜ್ಞರ ಪ್ರಕಾರ ಬಹು ದೊಡ್ಡ ಉಲ್ಕೆಯೊಂದು ಮೆಕ್ಸಿಕೋ ಬಳಿ ಬಡಿದು ಅದರಿಂದೆದ್ದ ಧೂಳು ಇಡೀ ಜಗತ್ತನ್ನೇ ಆವರಿಸಿತು. ಸಸ್ಯಗಳು ಮರೆಯಾದವು, ಇದರ ಹಿಂದೆಯೇ ಸಸ್ಯಾಹಾರಿ, ಮಾಂಸಹಾರಿ ಡೈನೋಸಾರ್ಗಳು ಕಣ್ಮರೆಯಾದವು. `ಪೆಡಂಭೂತಗಳು ಅಳಿದವೇಕೆ’ ಕೃತಿಯಲ್ಲಿ ಯಾವ ಯಾವ ಕಾಲಘಟ್ಟದಲ್ಲಿ ಯಾವ ಯಾವ ಬಗೆಯ ಡೈನೋಸಾರ್ ಗಳು ಭೂಮಿಯ ಮೇಲೆ ಅಡ್ಡಾಡಿದವು, ಅವುಗಳ ರಚನೆ ಹೇಗಿದ್ದವು? ಎಂಬುದನ್ನು ಚಿತ್ರಗಳ ಸಹಿತ ವಿವರಿಸಿದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books