ಚೆನ್ನದಾಸರ್ ಸಮುದಾಯ

Author : ಮಲ್ಲಿಕಾರ್ಜುನ ಬಿ. ಮಾನ್ಪಡೆ

Pages 276

₹ 80.00




Year of Publication: 2016
Published by: ಸಮಾಜ ಕಲ್ಯಾಣ ಇಲಾಖೆ
Address: ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ವಸಂತ ನಗರ, ಬೆಂಗಳೂರು
Phone: 9916202298

Synopsys

‘ಚೆನ್ನದಾಸರ್ ಸಮುದಾಯ’ ಲೇಖಕ ಡಾ. ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರ ಸಂಶೋಧನಾತ್ಮಕ ಕೃತಿ. ಪರಿಶಿಷ್ಟ ಜಾತಿಗೆ ಸೇರಿರುವ ಚೆನ್ನದಾಸರ್ ಸಮುದಾಯವು ದಾಸ, ದಾಸಯ್ಯ, ದಾಸರು, ದಾಸರ್, ದಾಸರಿ, ದಾಸರ, ದಂಗದಾಸ, ದೊಂಬಿದಾಸ, ಚಕ್ರವಾದ್ಯದಾಸರ, ದಂಡಗಿದಾಸರ, ಜಂಬೂದಾಸರ, ಹರಿದಾಸರ, ಶಂಖದಾಸ, ಮಾಲದಾಸರಿ, ದಶವಂತರು, ಆಟದ ದಾಸರು, ಹೊಲೆಯದಾಸರ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಾ ಬಂದಿದೆ.

ಇಂದಿಗೂ ಈ ಸಮುದಾಯ ಒಂದು ಕಡೆ ನೆಲೆಯೂರಿ ನಿಲ್ಲಲು ಸಾಧ್ಯವಾಗದೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ. ಚೆನ್ನದಾಸರ್ ಸಮುದಾಯ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಗುಜರಾತ್ ರಾಜ್ಯದಲ್ಲಿಯೂ ಕಂಡುಬರುತ್ತದೆ. ಈ ಸಮುದಾಯವರ ಸಾಂಪ್ರದಾಯಿಕ ವೃತ್ತಿ ಭಿಕ್ಷೆ ಬೇಡುವುದಾಗಿದೆ. ಬಹುಮಟ್ಟಿಗೆ ಮುಂದಿನ ಭವಿಷ್ಯದ ಬಗ್ಗೆ ಕನಸು ಕಾಣದೆ ಅದಕ್ಕಾಗಿ ಸಂಪತ್ತನ್ನು ಕೂಡಿಡದೆ ಅಂದಿನ ಜೀವನಕ್ಕಾಗಿ ಹೆಚ್ಚು ಶ್ರಮವಹಿಸುವ ಅಲ್ಪತೃಪ್ತ ಜನರಿವರು. ತುತ್ತಿನ ಚೀಲ ತುಂಬಿಸಿಕೊಳ್ಳಲು ಅನೇಕ ರೀತಿಯ ಉದ್ಯೋಗಗಳನ್ನು ಅನುಸರಿಸುತ್ತಾ ವೃತ್ತಿ ನೈಪುಣ್ಯತೆಯನ್ನು ಮೆರೆಯುತ್ತಾ ಚೆನ್ನದಾಸರ್ ಸಮುದಾಯ ಪಾರಂಪರಿಕ ಜ್ಞಾನವನ್ನು ಮುಂದುವರಿಸಿಕೊಂಡು ಬಂದಿದೆ.

ಇಂಥ ಅಪೂರ್ವ ಜ್ಞಾನವಾಹಿನಿಗಳ ಮೂಲ ಜನಕರೆನಿಸಿದ ಚೆನ್ನದಾಸರ್ ಸಮುದಾಯದ ಕುರಿತು ಅಪಾರವಾದ ಕ್ಷೇತ್ರಕಾರ್ಯದ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಅವರ ಸಮಾಜೋ-ಆರ್ಥಿಕ, ಶೈಕ್ಷಣಿಕ ಸ್ಥಿಗತಿಗಳ ಜೊತೆಗೆ ಚೆನ್ನದಾಸರ ಸಮುದಾಯದ ಅನನ್ಯತೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಇಂತಹ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವಶ್ಯಕವಾದ ಸಮಾಜೋ-ಆರ್ಥಿಕ ಹಾಗೂ ಶೈಕ್ಷಣಿಕ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚಿಸಿದ ಸಮಾಜಕಲ್ಯಾಣ ಇಲಾಖೆಯು ಇದೀಗ ಈ ಜಾತಿಗಳ ಸಮರ್ಪಕ ಅಧ್ಯಯನದ ವರದಿ ತಯಾರಿಸಲು ಮುಂದೆ ಬಂದ ಫಲವೇ ಡಾ.ಬಿ ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ನಡೆದ ಈ ಅಧ್ಯಯನ ಕೃತಿ.

About the Author

ಮಲ್ಲಿಕಾರ್ಜುನ ಬಿ. ಮಾನ್ಪಡೆ

ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ(ಜೆ) ಗ್ರಾಮದವರು. ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ ಪೂರ್ಣಗೊಳಿಸಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ  ‘ವಿಮುಕ್ತ ಬುಡಕಟ್ಟುಗಳ ಸಾಮಾಜಿಕ ಅಧ್ಯಯನ ಮತ್ತು ಹೈದರಬಾದ ಕರ್ನಾಟಕದ ಅಲೆಮಾರಿಗಳ ಸಮಾಜೋ- ಆರ್ಥಿಕ ಸ್ಥಿತಿಗತಿಗಳ ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಮತ್ತು ಪಿಡಿಎಫ್ ಪದವಿ ಪಡೆದಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಓದು ಮತ್ತು ಸಂಶೋಧನೆಗಳ ಕೃಷಿಯನ್ನು ...

READ MORE

Related Books