ಕಥಾವಸ್ತುವಾಗಿ ಸಂಕೇತಿಗಳು

Author : ಪ್ರಣತಾರ್ತಿಹರನ್

Pages 136

₹ 15.00




Year of Publication: 2000
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ಮೂರು ಲೇಖನಗಳ ಸಂಗ್ರಹ -ಕಥಾವಸ್ತುವಾಗಿ ಸಂಕೇತಿಗಳು. ಮೊದಲ ಎರಡು ಕಥೆಗಳು ಸಂಕೇತಿ ಸಮುದಾಯಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ಲೇಖಕರು ಪರಿಶೀಲಿಸಿರುವಂತೆಯೇ ಮೂರನೆಯದು ಹೇಗೆ ಸಂಬಂಧಿಸಿದ್ದಲ್ಲ ಎಂಬುದನ್ನು ವಿವರಿಸಿದ್ದಾರೆ. `ಭಲ್ಲೂಕಪುರದ ಅಪ್ಪಾಜಿಭಟ್ಟ' ಎಂಬುದು ಸಂಕೇತಿ ಸಮುದಾಯದ ಗೃಹಸ್ಥನೊಬ್ಬನ ಜೀವನದಲ್ಲಿ ನಡೆದ ಘಟನೆಯನ್ನಾಧರಿಸಿದ್ದು; ನಿಜ ಘಟನೆಯು ಐತಿಹ್ಯವಾಗಿ ಬೆಳೆದು, ಕಥೆಯಾಗಿ ಅರಳಿನಿಂತ ಸಂದರ್ಭ. `ಡಾ. ಸುಶೀಲಾ ಸಂಕೇತ್' ಎಂಬುದು ಸಂಕೇತಿ ಮಹಿಳೆಯೊಬ್ಬರಿಗೆ ಸಂಬಂಧಿಸಿದ ನೈಜ ಘಟನೆಯನ್ನಾಧರಿಸಿದ್ದು; ಸಂಕೇತಿ ಸುಮುದಾಯದ ಹಳ್ಳಿಯ ಸಂಪ್ರದಾಯಶೀಲ ಪರಿಸರವನ್ನು ಬಳಸಿಕೊಂಡು ಕಲಾತ್ಮಕವಾಗಿ ಬೆಳೆದುದು. ಭೂತಯ್ಯನ ಮಗ ಅಯ್ಯು ಹೆಮ್ಮಿಗೆಯ ಶ್ರೀವೈಷ್ಣವರೊಬ್ಬರಿಗೆ ಸಂಬಂಧಿಸಿದ ಕಥೆ. ಹೆಮ್ಮಿಗೆಯ ಶ್ರೀವೈಷ್ಣವರು ಅನೇಕ ಶತಮಾನಗಳ ಹಿಂದೆ ಸಂಕೇತಿ ಸಮುದಾಯದಿಂದ ಮತಾಂತರವಾದವರು. ತಿಗಳ ಮತ್ತು ಸಂಕೇ ತಿಗಳ ಎಂಬ ಪದಪ್ರಯೋಗಗಳ ಔಚಿತ್ಯವನ್ನು ಪ್ರಶ್ನಿಸಿಕೊಂಡು ಹೊರಟ ಸಂಶೋಧನ ಲೇಖನ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books