ಸಂವಾದ

Author : ಪ್ರಣತಾರ್ತಿಹರನ್

Pages 152

₹ 50.00




Year of Publication: 1998
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ಸಂಕೇತಿ ಸಮುದಾಯವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಹೊರಟಾಗ ಕರ್ನಾಟಕ-ತಮಿಳುನಾಡು-ಕೇರಳ ಈ ಮೂರೂ ರಾಜ್ಯಗಳಲ್ಲಿ ವ್ಯಾಪಕವಾಗಿ ಕ್ಷೇತ್ರಕಾರ್ಯ ಮಾಡಲಾಯಿತು. ಆ ಸಂದರ್ಭದಲ್ಲಿಯೇ ಸಂಕೇತಿಯೇತರ ಬ್ರಾಹ್ಮಣರನ್ನೂ ಬ್ರಾಹ್ಮಣೇತರರನ್ನೂ ಸಂದರ್ಶಿಸಿಕೊಳ್ಳಲಾಯಿತು. ಹೀಗೆ ಸಂಕೇತಿಯೇತರರು ಸಂಕೇತಿ ಸಮುದಾಯದ ಬಗೆಗೆ ಬರೆದ ಲೇಖನಗಳನ್ನು ಹುಡುಕಿ ಸಂಕಲಿಸಿದ ಕೃತಿ ‘ಸಂವಾದ’. ಈ ಕೃತಿಯಲ್ಲಿರುವ ಲೇಖನಗಳು 20ನೆಯ ಶತಮಾನವನ್ನು ವ್ಯಾಪಿಸಿವೆ. ಕಾರಂತ, ಮಾಸ್ತಿ, ನವರತ್ನ ರಾಮರಾಯರಂಥ ಅನುಭವಿಗಳು ಬರೆದ ಲೇಖನಗಳು ಇಲ್ಲಿ ಸೇರಿವೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books